Asianet Suvarna News Asianet Suvarna News

ಆಸ್ಪತ್ರೆಗಳ ಅಮಾನವೀಯತೆಗೆ ಕೊನೆಯೇ ಇಲ್ವಾ?

ಬೆಂಗಳೂರಿನಲ್ಲಿ ಎರಡು ದಿನ 15 ಆಸ್ಪತ್ರೆ ಸುತ್ತಿದರೂ ಪತ್ನಿಗೆ ಚಿಕಿತ್ಸೆ ಸಿಗಲಿಲ್ಲ. ಈ ವ್ಯವಸ್ಥೆ ನನ್ನ ಪತ್ನಿಯನ್ನು ಬಲಿ ತೆಗೆದುಕೊಂಡು ಬಿಡ್ತು ಎಂದು ಪತಿ ಗೋಳಾಡಿದ್ದಾರೆ. ಬನ್ನೇರಘಟ್ಟ ರಸ್ತೆಯ ಬಿಳೇಕಹಳ್ಳಿಯ ನಿವಾಸೆ ಪ್ರಾಣಬಿಟ್ಟ ದುರ್ದೈವಿ.

ಬೆಂಗಳೂರು(ಜು.06): ಉದ್ಯಾನನಗರಿಯ ಆಸ್ಪತ್ರೆಗಳ ಅಮಾನವೀಯತೆಗೆ ಕೊನೆಯೇ ಇಲ್ವಾ? ಈ ಸ್ಟೋರಿ ಏನು ಅಂತ ತಿಳಿದ್ರೆ ನಿಮ್ಮ ಕಣ್ಣಂಚಲ್ಲೂ ಒಂದು ಹನಿ ನೀರು ಬರೋದು ಗ್ಯಾರಂಟಿ. ಯಾಕೆಂದ್ರೆ 15 ಆಸ್ಪತ್ರೆ ಸುತ್ತಿ ಚಿಕಿತ್ಸೆ ಸಿಗದೇ ಪ್ರಾಣಬಿಟ್ಟ ವ್ಯಕ್ತಿಯ ಕಥೆಯಿದು.

ಎರಡು ದಿನ 15 ಆಸ್ಪತ್ರೆ ಸುತ್ತಿದರೂ ಪತ್ನಿಗೆ ಚಿಕಿತ್ಸೆ ಸಿಗಲಿಲ್ಲ. ಈ ವ್ಯವಸ್ಥೆ ನನ್ನ ಪತ್ನಿಯನ್ನು ಬಲಿ ತೆಗೆದುಕೊಂಡು ಬಿಡ್ತು ಎಂದು ಪತಿ ಗೋಳಾಡಿದ್ದಾರೆ. ಬನ್ನೇರಘಟ್ಟ ರಸ್ತೆಯ ಬಿಳೇಕಹಳ್ಳಿಯ ನಿವಾಸೆ ಪ್ರಾಣಬಿಟ್ಟ ದುರ್ದೈವಿ.

ವೃದ್ಧ ಪತಿಯ ಶವದೊಂದಿಗೆ ದಿನ ಕಳೆದ ಪತ್ನಿ: ಕೊರೋನಾ ಭಯದಿಂದ ಬಾರದ ಸಂಬಂಧಿಕರು..!

ಶುಗರ್ ಜಾಸ್ತಿಯಾಗಿ ಪತ್ನಿಗೆ ಉಸಿರಾಟದ ತೊಂದರೆಯಾಗಿದೆ. ಬಳಿಕ ಕಿಮ್ಸ್, ವಿಕ್ಟೋರಿಯಾ, ಕೆ.ಸಿ. ಜನರಲ್ ಆಸ್ಪತ್ರೆ ಸೇರಿದಂತೆ ಎರಡು ದಿನದಲ್ಲಿ 15 ಆಸ್ಪತ್ರೆ ಸುತ್ತಿದರೂ ಚಿಕಿತ್ಸೆ ಸಿಕ್ಕಿಲ್ಲ. ಈ ಸಾವು ನ್ಯಾಯವೇ ಎನ್ನುವ ಪ್ರಶ್ನೆ ಎದ್ದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

Video Top Stories