Asianet Suvarna News Asianet Suvarna News

'ಮರಗಳನ್ನು ಉಳಿಸಿ, ನೀರನ್ನು ಸಂರಕ್ಷಿಸಿ' ಎಂದು ಪರಿಸರ ಪ್ರೇಮಿಯ ಸೈಕಲ್ ಯಾತ್ರೆ

'ಮರಗಳನ್ನು ಉಳಿಸಿ, ನೀರನ್ನು ಸಂರಕ್ಷಿಸಿ' ಎಂದು ಪಶ್ಚಿಮ ಬಂಗಾಳದ ಪೊರಿಮರಿ ಕಾಂಜಿ ಸೈಕಲ್ ಯಾತ್ರೆ ಮಾಡುತ್ತಾ ಜನಜಾಗೃತಿ ಮೂಡಿಸುತ್ತಿದ್ದಾರೆ. 

ಕಾರವಾರ (ಮಾ. 07): 'ಮರಗಳನ್ನು ಉಳಿಸಿ, ನೀರನ್ನು ಸಂರಕ್ಷಿಸಿ' ಎಂದು ಪಶ್ಚಿಮ ಬಂಗಾಳದ ಪೊರಿಮರಿ ಕಾಂಜಿ ಸೈಕಲ್ ಯಾತ್ರೆ ಮಾಡುತ್ತಾ ಜನಜಾಗೃತಿ ಮೂಡಿಸುತ್ತಿದ್ದಾರೆ. ಪೊರಿಮಲಿ ಕಾಂಜಿ ಜನವರಿ 1ರಂದು ಪಶ್ಚಿಮ ಬಂಗಾಳದ ಕೊಲ್ಕತ್ತಾದಿಂದ ಸೈಕಲ್ ಯಾತ್ರೆಯನ್ನು ಆರಂಭಿಸಿದ್ದಾರೆ. ಓಡಿಸ್ಸಾ, ಆಂಧ್ರಪ್ರದೇಶ, ತಮಿಳುನಾಡು, ಕೇರಳಕ್ಕೆ ಭೇಟಿ ನೀಡಿ,  ಕಾರವಾರಕ್ಕೂ ಆಗಮಿಸಿದ್ದಾರೆ. 

ದಿನಕ್ಕೆ 120 ಕಿಲೋಮೀಟರ್‌ನಂತೆ ಈವರೆಗೆ ಸುಮಾರು 5000 ಕಿಮೀ ಯಾತ್ರೆ ಮುಗಿಸಿದ್ದಾರೆ. ಮಾರ್ಗಮಧ್ಯೆ ಸಿಗೋ ಜನರಿಗೆ ಪರಿಸರ ರಕ್ಷಣೆ, ನೀರು ಸಂರಕ್ಷಣೆ ಬಗ್ಗೆ ಮೂಡಿಸುತ್ತಾರೆ.  ಮುಂದಿನ 6 ತಿಂಗಳಲ್ಲಿ ಗಡಿಭಾಗದ ರಾಜ್ಯಗಳ ಪ್ರವಾಸ ಪೂರ್ಣಗೊಳಿಸಿ ಊರು ತಲುಪುತ್ತಾರಂತೆ ಈ ಪರಿಸರ ಹೋರಾಟಗಾರ!