ಪಶುಸಂಗೋಪನೆಗೆ ಸಿದ್ದವಾಯ್ತು ವಾರ್ರೂಮ್, ಆಧುನಿಕ ವಿಧಾನದ ಮೂಲಕ ರೈತರಿಗೆ ಪರಿಹಾರ
- ಜಾನುವಾರುಗಳ ರಕ್ಷಣೆ, ಅಭಿವೃದ್ಧಿಗಾಗಿ ವಾರ್ ರೂಂ
- ರೈತರ ಮೊಬೈಲ್ಗೆ ನಿರಂತರ ಮಾಹಿತಿ ರವಾನೆ
- ಆಧುನಿಕ ವಿಧಾನದ ಮೂಲಕ ಸಮಸ್ಯೆಗೆ ಪರಿಹಾರ
ಬೆಂಗಳೂರು (ಮೇ. 29): ಪಸುಸಂಗೋಪನೆಯಲ್ಲಿ ತೊಡಗಿದವರಿಗೆ ಮಾರ್ಗದರ್ಶನ ನೀಡಲು ರಾಜ್ಯದಲ್ಲೇ ಮೊದಲ ಬಾರಿಗೆ ಸುಸಜ್ಜಿತ ವಾರ್ ರೂಮ್ ಅನುಷ್ಠಾನಗೊಳ್ಳಲಿದೆ. ವಾರ್ ರೂಂ ಮೂಲಕ ರೈತರ ಸಮಸ್ಯೆಗಳು, ಜಾನುವಾರುಗಳ ಆರೋಗ್ಯ ಸಮಸ್ಯೆ, ಮಾಹಿತಿ ನೀಡಲು ವಾರ್ ರೂಮ್ ಸಿದ್ಧಗೊಂಡಿದೆ. ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದು, ಪ್ರತ್ಯೇಕ ಟೋಲ್ ಫ್ರೀ ನಂಬರ್ನ್ನು ಮಾಡಲಾಗಿದೆ.