ಬಸ್ ಬಂದ್, ಮೆಜಿಸ್ಟಿಕ್ನಲ್ಲಿ ಪ್ರಯಾಣಿಕರ ಪರದಾಟ, ಖಾಸಗಿ ಬಸ್ ಸಂಚಾರದಲ್ಲೂ ಅವ್ಯವಸ್ಥೆ
ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರ ಅನಾನುಕೂಲ ತಪ್ಪಿಸಲು ಖಾಸಗಿ ವಾಹನಗಳ ಸಂಚಾರಕ್ಕೆ ಸರ್ಕಾರ ಅನುವು ಮಾಡಿಕೊಟ್ಟಿದೆ.
ಬೆಂಗಳೂರು (ಏ. 07): ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರ ಅನಾನುಕೂಲ ತಪ್ಪಿಸಲು ಖಾಸಗಿ ವಾಹನಗಳ ಸಂಚಾರಕ್ಕೆ ಸರ್ಕಾರ ಅನುವು ಮಾಡಿಕೊಟ್ಟಿದೆ. ಮೆಜಿಸ್ಟಿಕ್ನ ಚಿತ್ರಣ ನೋಡುವುದಾರೆ, ಇಂದು ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್ಗಳಿಗೆ ಖಾಸಗಿ ಬಸ್ಗಳು ಬಂದಿದೆ. ಕೆಲವು ಭಾಗಗಳಿಗೆ ಬಸ್ ಹೋಗದೇ ಇರುವುದರಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ. ಕೆಲವರಿಗೆ ಮಾಹಿತಿ ಇಲ್ಲದೇ, ಬಂದು ತೊಂದರೆಯಲ್ಲಿ ಸಿಲುಕಿಕೊಂಡಿದ್ದಾರೆ.