ದೇವಸ್ಥಾನಗಳ ಮೇಲೆ ಯಾಕೆ ಟಾರ್ಗೆಟ್..? ಇದನ್ನು ಕೂಡಲೇ ನಿಲ್ಲಿಸಬೇಕು: ರೇಣುಕಾಚಾರ್ಯ
ಮೈಸೂರಿನಲ್ಲಿ ದೇವಸ್ಥಾನಗಳನ್ನು ತೆರವು ಮಾಡಿದ್ದು ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ. ಏಕಾಏಕಿ ಒಡೆಯುವುದು ಸರಿಯಲ್ಲ: ರೇಣುಕಾಚಾರ್ಯ
ಬೆಂಗಳೂರು (ಸೆ. 14): ಮೈಸೂರಿನಲ್ಲಿ ದೇವಸ್ಥಾನಗಳನ್ನು ತೆರವು ಮಾಡಿದ್ದು ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ. ಏಕಾಏಕಿ ಒಡೆಯುವುದು ಸರಿಯಲ್ಲ. ಆಡಳಿತ ಮಂಡಳಿ, ಸ್ಥಳೀಯ ಶಾಸಕರು, ಸಮಿತಿಯ ಜೊತೆ ಚರ್ಚೆ ಮಾಡುವ ಬದಲು ಕೆಲವು ಅಧಿಕಾರಿಗಳ ಸರ್ವಾಧಿಕಾರಿಗಳಂತೆ, ದುರಹಂಕಾರದಿಂದ ವರ್ತಿಸುತ್ತಾರೆ. ಕೇವಲ ದೇವಸ್ಥಾನಗಳಿಗೆ ಮಾತ್ರ ನೋಟಿಫಿಕೇಶನ್ ಅಗಿದೆ. ದೇವಸ್ಥಾನಗಳ ಮೇಲೆ ಯಾಕೆ ಟಾರ್ಗೆಟ್..? ಇದನ್ನು ಕೂಡಲೇ ನಿಲ್ಲಿಸಬೇಕು. ಸಿಎಂ ಕೂಡಾ ಈ ಬಗ್ಗೆ ಭರವಸೆ ನಿಡಿದ್ದಾರೆ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.
ನಾವು ರಸ್ತೆ, ಚರಂಡಿ ಮಾತ್ರ ಮಾಡೋಕೆ ಅಧಿಕಾರಕ್ಕೆ ಬಂದಿಲ್ಲ, ನಮಗೂ ಭಾವನೆಗಳಿವೆ: ಸಿ ಟಿ ರವಿ