Asianet Suvarna News Asianet Suvarna News

ಕುಮಾರಣ್ಣನ ಸಿದ್ಧೌಷಧ ಬಾಂಬ್; ರಾಜ್ಯ ರಾಜಕಾರಣದಲ್ಲಿ ಸಂಚಲನ

ಕೊರೋನಾ ಸಂಕಷ್ಟದ ಹೊತ್ತಿನಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮತ್ತೋರ್ವ ಮಾಜಿ ಸಿಎಂ ವಿರುದ್ಧ ನೇರಾ ನೇರ ಆರೋಪ ಮಾಡಿದ್ದಾರೆ. ಮೈತ್ರಿ ಸರ್ಕಾರ ಉರುಳಿ ಬಿದ್ದು ಒಂದು ವರ್ಷ ತುಂಬಿದ ದಿನದಂದೇ ಕುಮಾರಸ್ವಾಮಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. 

ಬೆಂಗಳೂರು(ಜು.23): ಬರೋಬ್ಬರಿ 365 ದಿನಗಳ ನಂತರ ಮೈತ್ರಿ ಸರ್ಕಾರ ಉರುಳಲು ಕಾರಣವೇನು ಎನ್ನುವ ರಹಸ್ಯ ಬಯಲಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ಸಿಡಿಸಿದ ಸಿದ್ಧೌಷಧ ಬಾಂಬ್ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನವನ್ನು ಹುಟ್ಟುಹಾಕಿದೆ.

ಕೊರೋನಾ ಸಂಕಷ್ಟದ ಹೊತ್ತಿನಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮತ್ತೋರ್ವ ಮಾಜಿ ಸಿಎಂ ವಿರುದ್ಧ ನೇರಾ ನೇರ ಆರೋಪ ಮಾಡಿದ್ದಾರೆ. ಮೈತ್ರಿ ಸರ್ಕಾರ ಉರುಳಿ ಬಿದ್ದು ಒಂದು ವರ್ಷ ತುಂಬಿದ ದಿನದಂದೇ ಕುಮಾರಸ್ವಾಮಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. 

'ಭ್ರಷ್ಟಾಚಾರದ ಸುವಾಸನೆ ಬರ್ತಿದೆ ಅಂಥ ಕರಿಬೇಕಾ' ಸರ್ಕಾರಕ್ಕೆ ಸಿದ್ದು ದಾಖಲೆ ಪಂಚ್!

ಸಿದ್ಧೌಷಧ ಮಂತ್ರಕ್ಕೆ ಕುಮಾರ ಸರ್ಕಾರ ಉರುಳಿ ಬಿದ್ದಿತ್ತಂತೆ. ಸರಿಯಾಗಿ 365 ದಿನಗಳ ಬಳಿಕ ಮೈತ್ರಿ ಖೇಲ್ ಖತಂ ರಹಸ್ಯ ಸ್ಫೋಟಗೊಂಡಿದೆ. ಏನಿದು ಸಿದ್ಧೌಷಧ ಮಂತ್ರ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Video Top Stories