Asianet Suvarna News Asianet Suvarna News

ಸುವರ್ಣ ನ್ಯೂಸ್ ವರದಿಯಿಂದ ಎಚ್ಚೆತ್ತ ಬಿಬಿಎಂಪಿ: PPE ಕಿಟ್ ವಿಲೇವಾರಿ ಆರಂಭ

ಮಹದೇವಪುರದ ಕೆ.ಅರ್. ಪುರಂನ ರಸ್ತೆಯಲ್ಲಿ ಬಳಸಿ ಎಸೆದ ರಾಶಿ ರಾಶಿ ಪಿಪಿಇ ಕಿಟ್‌ಗಳು ಕಂಡುಬಂದಿದ್ದವು. ಇದೀಗ ಬಿಬಿಎಂಪಿ ಎಚ್ಚೆತ್ತುಕೊಳ್ಳುವಂತೆ ಮಾಡುವಲ್ಲಿ ಸುವರ್ಣ ನ್ಯೂಸ್ ವರದಿ ಪ್ರಮುಖಪಾತ್ರ ವಹಿಸಿದೆ.

ಬೆಂಗಳೂರು(ಜು.11): ಪಿಪಿಇ ಕಿಟ್ ಕೆ.ಆರ್. ಪುರಂ ರಸ್ತೆ ಬದಿ ಬೇಕಾಬಿಟ್ಟಿ ಬಿದ್ದಿರುವ ಕುರಿತಂತೆ ಸುವರ್ಣ ನ್ಯೂಸ್ ನಿರಂತರವಾಗಿ ವರದಿ ಪ್ರಕಟಿಸಿದ ಬೆನ್ನಲ್ಲೇ ಬಿಬಿಎಂಪಿ ಎಚ್ಚೆತ್ತುಕೊಂಡಿದ್ದು, ಇದೀಗ ವಿಲೇವಾರಿ ಮಾಡಲು ಕ್ರಮಕೈಗೊಂಡಿದೆ. 

ಮಹದೇವಪುರದ ಕೆ.ಅರ್. ಪುರಂನ ರಸ್ತೆಯಲ್ಲಿ ಬಳಸಿ ಎಸೆದ ರಾಶಿ ರಾಶಿ ಪಿಪಿಇ ಕಿಟ್‌ಗಳು ಕಂಡುಬಂದಿದ್ದವು. ಇದೀಗ ಬಿಬಿಎಂಪಿ ಎಚ್ಚೆತ್ತುಕೊಳ್ಳುವಂತೆ ಮಾಡುವಲ್ಲಿ ಸುವರ್ಣ ನ್ಯೂಸ್ ವರದಿ ಪ್ರಮುಖಪಾತ್ರ ವಹಿಸಿದೆ.

ಸುದ್ದಿ ಮಾಡಿ, ಬುದ್ದಿ ಹೇಳಿದ್ರೂ ಎಚ್ಚೆತ್ತುಕೊಳ್ಳದ ಬಿಬಿಎಂಪಿ..!

ಸುವರ್ಣ ನ್ಯೂಸ್ ಗ್ರೌಂಡ್ ರಿಪೋರ್ಟ್ ಮಾಡುವ ಮೂಲಕ ರಿಯಾಲಿಟಿ ಚೆಕ್ ನಡೆಸಿತ್ತು. ವರದಿ ಬಳಿಕ ಇದೀಗ ಸ್ಥಳಕ್ಕೆ ಬಿಬಿಎಂಪಿ ಮಾರ್ಷಲ್‌ಗಳು ಬಂದು ಪಿಪಿಇ ಕಿಟ್ ವಿಲೇವಾರಿಗೆ ಕ್ರಮ ಕೈಗೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Video Top Stories