2 ನೇ ಅಲೆ ರಾಕ್ಷಸೀ ರೂಪಕ್ಕೆ ಆ 5 ಕಾರಣಗಳಾದ್ರೂ ಏನ್ ಗೊತ್ತಾ..?
ಕೋವಿಡ್ 19 ಆರ್ಭಟಕ್ಕೆ ರಾಜ್ಯ ನಲುಗಿ ಹೋಗಿದೆ. ನಿಯಂತ್ರಣಕ್ಕೆ ಸಿಗದೇ, ನಾಗಾಲೋಟದಿಂದ ಮುನ್ನುಗ್ಗುತ್ತಿರುವ ಕೊರೊನಾಗೆ ಬ್ರೇಕ್ ಹಾಕಲು ಸರ್ಕಾರ ಟಫ್ರೂಲ್ಸ್ಗೆ ಮುಂದಾಗಿದೆ. ಸೋಮವಾರ ಬರೋಬ್ಬರಿ 146 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಬೆಂಗಳೂರು (ಏ. 20): ಕೋವಿಡ್ 19 ಆರ್ಭಟಕ್ಕೆ ರಾಜ್ಯ ನಲುಗಿ ಹೋಗಿದೆ. ನಿಯಂತ್ರಣಕ್ಕೆ ಸಿಗದೇ, ನಾಗಾಲೋಟದಿಂದ ಮುನ್ನುಗ್ಗುತ್ತಿರುವ ಕೊರೊನಾಗೆ ಬ್ರೇಕ್ ಹಾಕಲು ಸರ್ಕಾರ ಟಫ್ರೂಲ್ಸ್ಗೆ ಮುಂದಾಗಿದೆ. ಸೋಮವಾರ ಬರೋಬ್ಬರಿ 146 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಬೆಂಗ್ಳೂರಲ್ಲಿ ಕೈ ಮೀರಿದ ಕೊರೊನಾ, ರಸ್ತೆಯಲ್ಲೇ ವ್ಯಕ್ತಿಯ ನರಳಾಟ
ಈ ಮೂಲಕ 2 ನೇ ಅಲೆ ಪ್ರಾಣಕ್ಕೆ ಎರವಾಗಲಾರದು ಎಂಬ ಲೆಕ್ಕಾಚಾರ ತಲೆಕೆಳಗಾಗಿದೆ. 2020 ರ ಸೆಪ್ಟೆಂಬರ್ ಬಳಿಕದ ಅತಿ ಹೆಚ್ಚು ಕೋವಿಡ್ ಸಾವು ಸೋಮವಾರ ವರದಿಯಾಗಿದೆ. ಇನ್ನು ರಾಜ್ಯದ ಮಟ್ಟಿಗೆ ಬಂದರೆ ಬೆಂಗಳೂರಿನಲ್ಲಿ 97 ಮಂದಿ ಬಲಿಯಾಗಿದ್ದಾರೆ. ಹಾಗಾದರೆ 2 ನೇ ಅಲೆ ಈ ಮಟ್ಟಿಗೆ ಹರಡಲು ಕಾರಣವೇನು..?