ಬಿಡಿಎಗೆ ಎಂಟ್ರಿಕೊಟ್ಟು ಜನರ ದಿಕ್ಕು ತಪ್ಪಿಸ್ತಿದಾರಾ ಕೋಡಿಹಳ್ಳಿ ಚಂದ್ರಶೇಖರ್..?
ರೈತರ ಪ್ರತಿಭಟನೆ, ಸಾರಿಗೆ ಪ್ರತಿಭಟನೆಯಲ್ಲಿ ಗುರುತಿಸಿಕೊಂಡಿದ್ದ ಕೋಡಿಹಳ್ಳಿ ಚಂದ್ರಶೇಖರ್, ಬಿಡಿಎಗೆ ಎಂಟ್ರಿ ಕೊಟ್ಟು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ.
ಬೆಂಗಳೂರು (ಮಾ, 10): ರೈತರ ಪ್ರತಿಭಟನೆ, ಸಾರಿಗೆ ಪ್ರತಿಭಟನೆಯಲ್ಲಿ ಗುರುತಿಸಿಕೊಂಡಿದ್ದ ಕೋಡಿಹಳ್ಳಿ ಚಂದ್ರಶೇಖರ್, ಬಿಡಿಎಗೆ ಎಂಟ್ರಿ ಕೊಟ್ಟು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಡಾ. ಶಿವರಾಮ ಕಾರಂತ್ ಅಕ್ರಮ ಕಟ್ಟಡಗಳ ಪರಿಶೀಲನೆಗೆ ಸುಪ್ರೀಂಕೋರ್ಟ್ ಸಮಿತಿ ರಚಿಸಿತ್ತು. ಸಾರ್ವಜನಿಕರಿಂದ ದಾಖಲೆ ಸಂಗ್ರಹಕ್ಕೆ ಮುಂದಾಗಿತ್ತು. ಆದರೆ ದಾಖಲೆ ನೀಡದಂತೆ, ಜನರನ್ನು ದಿಕ್ಕು ತಪ್ಪಿಸ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಸಮಿತಿ ಕೋಡಿಹಳ್ಳಿಗೆ ನೋಟಿಸ್ ನೀಡಿದೆ ಎನ್ನಲಾಗಿದೆ.