ಅರಮನೆ ಮೈದಾನದಲ್ಲಿ ವಲಸೆ ಕಾರ್ಮಿಕರ ದಂಡು!
ಬೆಂಗಳೂರಿನ ಅರಮನೆ ಮೈದಾನದಲ್ಲಿ ಜಮಾಯಿಸಿದ ಕಾರ್ಮಿಕರು| ತಮ್ಮ ತವರೂರಿಗೆ ತೆರಳುವ ತವಕದಲ್ಲಿ ಕಾರ್ಮಿಕರು| ಭಾನುವಾರ ಸಂಜೆ ಮಾಲೂರಿನಿಂದ ಉತ್ತರ ಪ್ರದೇಶ ಹಾಗೂ ತ್ರಿಪುರಾಗೆ ತೆರಳಲಿರುವ ರೈಲು
ಬೆಂಗಳೂರು(ಮೇ.10): ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಜಮಾಯಿಸಿದ್ದಾರೆ. ಈಗಾಗಲೇ ಪೊಲೀಸರು ಈ ಕಾರ್ಮಿಕರ ಥರ್ಮಲ್ ಸ್ಕ್ರೀನಿಂಗ್ ನಡೆಸಿದ್ದಾರೆ.
ಇನ್ನು ಈ ಕಾರ್ಮಿಕರು ಇಂದು ಸಂಜೆ ಶ್ರಮಿಕ್ ಸ್ಪೆಷಲ್ ರೈಲಿನ ಮೂಲಕ ತಮ್ಮ ತವರೂರಿಗೆ ಮರಳಲಿದ್ದಾರೆ.
ಇಂದು, ಭಾನುವಾರ ಸಂಜೆ ಮಾಲೂರು, ಚಿಕ್ಕಬಾಣಾವರದಿಂದ ಹೊರಡಲಿರುವ ಶ್ರಮಿಕ್ ಸ್ಪೆಷಲ್ ರೈಲು ಮಧ್ಯಪ್ರದೇಶ ಹಾಗೂ ತ್ರಿಪುರಾಗೆ ತೆರಳಲಿದೆ.