Asianet Suvarna News Asianet Suvarna News

Weekend Curfew ವೀಕೆಂಡ್ ಕರ್ಫ್ಯೂಗೆ ಎಚ್‌ಡಿಕೆ ವಿರೋಧ, ಲಾಕ್‌ಡೌನ್ ಮಾಡೋದಾದ್ರೆ ಪ್ಯಾಕೇಜ್ ಘೋಷಿಸಿ

ಕೊರೋನಾ 3ನೇ ಅಲೆಗೆ ಕಡಿವಾಣ ಹಾಕಲೆಂದು ಸರ್ಕಾರ ಘೋಷಿಸಿರುವ ರಾತ್ರಿಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂಗಳಿಂದ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ವರ್ಗಗಳಿಗೆ ನೆರವಾಗಲು ಶೀಘ್ರ ಪ್ಯಾಕೇಜ್ ಘೋಷಿಸಬೇಕು ಎಂದು ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

First Published Jan 19, 2022, 7:11 PM IST | Last Updated Jan 19, 2022, 7:11 PM IST

ಬೆಂಗಳೂರು, (ಜ.19): ಕೊರೋನಾ 3ನೇ ಅಲೆಗೆ ಕಡಿವಾಣ ಹಾಕಲೆಂದು ಸರ್ಕಾರ ಘೋಷಿಸಿರುವ ರಾತ್ರಿಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂಗಳಿಂದ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ವರ್ಗಗಳಿಗೆ ನೆರವಾಗಲು ಶೀಘ್ರ ಪ್ಯಾಕೇಜ್ ಘೋಷಿಸಬೇಕು ಎಂದು ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

Coronavirus ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಕೋವಿಡ್ ಸ್ಫೋಟ, ಅಶ್ವಥ್ ನಾರಾಯಣ ಆತಂಕ

 ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ದೊಡ್ಡಮಟ್ಟದ ಪ್ಯಾಕೇಜ್ ಘೋಷಿಸಬೇಕೆಂದು ನಾನು ಹೇಳುತ್ತಿಲ್ಲ. ಸಣ್ಣರೈತರಿಗೆ ಮಾರಾಟ ವ್ಯವಸ್ಥೆ, ಬೀದಿ ಬದಿ ವ್ಯಾಪಾರಸ್ಥರಿಗೆ ಆರ್ಥಿಕ ನೆರವು ನೀಡಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.