Asianet Suvarna News Asianet Suvarna News

ರಂಗೇರಿದ ಸಿಂದಗಿ, ಹಾನಗಲ್ ಉಪಚುನಾವಣಾ ಕಣ, ಇಂದು ಹಾನಗಲ್‌ನಲ್ಲಿ ಸಿಎಂ ಪ್ರಚಾರ

ಹಾನಗಲ್, ಸಿಂದಗಿ ಉಪಚುನಾವಣಾ ಕಣ ರಂಗೇರಿದೆ. 2 ಕ್ಷೇತ್ರಗಳನ್ನು ಗೆಲ್ಲಲು ಸಚಿವರಿಗೆ ಸಿಎಂ ಬೊಮ್ಮಾಯಿ ಟಾಸ್ಕ್ ನೀಡಿದ್ದಾರೆ. 

ಬೆಂಗಳೂರು (ಅ. 17): ಹಾನಗಲ್, ಸಿಂದಗಿ ಉಪಚುನಾವಣಾ (ByElection) ಕಣ ರಂಗೇರಿದೆ. 2 ಕ್ಷೇತ್ರಗಳನ್ನು ಗೆಲ್ಲಲು ಸಚಿವರಿಗೆ ಸಿಎಂ ಬೊಮ್ಮಾಯಿ (Basavaraj Bommai) ಟಾಸ್ಕ್ ನೀಡಿದ್ದಾರೆ.

ಟಿಪ್ಪು ಜಯಂತಿ ಅಂದೇ ವಿರೋಧಿಸಿದ್ದೆ, ಸಿದ್ದುಗೆ ಗುದ್ದಿದ ಸಿಎಂ ಇಬ್ರಾಹಿಂ!

ಉಪಚುನಾವಣಾ ಉಸ್ತುವಾರಿಗಳು ಕ್ಷೇತ್ರದಲ್ಲಿದ್ದು ಪ್ರಚಾರ ಮಾಡಬೇಕು, ಅವರು ಪ್ರತಿನಿಧಿಸುವ ಸಮುದಾಯಗಳ ಮುಖಂಡರ ಜೊತೆ ಚರ್ಚೆ ನಡೆಸಬೇಕು. ಅವರ ಕುಂದುಕೊರತೆಗಳನ್ನು ಆಲಿಸಬೇಕು ಎಂದು ಸಿಎಂ ಹೇಳಿದ್ದಾರೆ. ಇಂದು ಹಾನಗಲ್‌ನಲ್ಲಿ (Hanagal) ಬಿಜೆಪಿ ಅಭ್ಯರ್ಥಿ ಸಜ್ಜನವರ ಪರ ಸಿಎಂ ಪ್ರಚಾರ ಮಾಡಲಿದ್ಧಾರೆ.