ಚಾಣಕ್ಯ ವಿವಿ ಬಿಲ್ ಪಾಸ್ ವಿವಾದ: ಸರ್ಕಾರದ ನಡೆಗೆ ಸಿದ್ದರಾಮಯ್ಯ ಆಕ್ರೋಶ
ಚಾಣಕ್ಯ ವಿವಿ ಬಿಲ್ ಪಾಸ್ ವಿವಾದಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಸೆ. 22): ಚಾಣಕ್ಯ ವಿವಿ ಬಿಲ್ ಪಾಸ್ ವಿವಾದಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಾಹುಲಿಯಲ್ಲ, ರಾಜಗುರು! ಹೊಸ ಗೆಟಪ್ನಲ್ಲಿ ಬಿಎಸ್ವೈ, ಬೆಚ್ಚಿ ಬಿದ್ರು ಸಿದ್ದರಾಮಯ್ಯ!
ಸರ್ಕಾರ ಆತುರವಾಗಿ ಮಸೂದೆಯನ್ನು ಅಂಗೀಕರಿಸಿದೆ. ಕೈಗಾರಿಕೆ ಉದ್ದೇಶಕ್ಕೆ ಭೂ ಸ್ವಾದೀನ ಮಾಡಲಾಗಿತ್ತು. ಈ ಭೂಮಿಯನ್ನು ಖಾಸಗಿ ವಿವಿ ಸ್ಥಾಪನೆಗೆ ನೀಡಲಾಗಿದೆ. 116 ಎಕರೆ ಭೂಮಿಯನ್ನು ಕೇವಲ 50 ಕೋಟಿಗೆ ನೀಡಲಾಗಿದೆ. ಮನುವಾದಿ ಸಂಸ್ಕೃತಿ ಹೊಂದಿರುವ ಸಂಸ್ಥೆಗೆ ನೆರವು ನೀಡಿದ್ದಾರೆ. ಚರ್ಚೆಗೆ ಅವಕಾಶವನ್ನೇ ಕೊಟ್ಟಿಲ್ಲ' ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.