ಮೋದಿಯವರದ್ದು ಬರೀ ರಾಜಕೀಯ ಭಾಷಣ, ರೈತರ ಬಗ್ಗೆ ಕಾಳಜಿ ಇಲ್ಲ: ಸಿದ್ದರಾಮಯ್ಯ ಕಿಡಿ
ಬೆಂಗಳೂರು (ಏ. 14): ಲಾಕ್ಡೌನ್ ಮುಂದುವರಿಕೆಗೆ ವಿರೋಧ ಮಾಡಲ್ಲ. ಪ್ರಧಾನಿ ಮೋದಿಯವರದ್ದು ರಾಜಕೀಯ ಭಾಷಣ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳೀಕೆ ನೀಡಿದ್ದಾರೆ. ಎಲ್ಲದಕ್ಕಿಂತ ಜನರ ಜೀವ ಮುಖ್ಯ. ಹಾಗಾಗಿ ಲಾಕ್ಡೌನ್ ಅತ್ಯಗತ್ಯ. ಆದರೆ ನಷ್ಟ ಅನುಭವಿಸಿರುವ ರೈತರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ಕಿಡಿ ಕಾರಿದ್ದಾರೆ. ಲಾಕ್ಡೌನ್ನಿಂದ ರೈತರು, ಕೈಗಾರಿಕೆಗಳು ನಷ್ಟದಲ್ಲಿವೆ. ಅವುಗಳ ಪುನಶ್ಚೇತನಕ್ಕೆ ಏನಾದರೂ ಕ್ರಮ ಕೈಗೊಳ್ಳಬೇಕಿತ್ತು ಎಂದಿದ್ದಾರೆ.
ಹುಬ್ಬಳ್ಳಿ ಸೋಂಕಿತನ ಬೆಚ್ಚಿಬೀಳಿಸುವ ಟ್ರಾವೆಲ್ ಹಿಸ್ಟರಿ, ಯಲ್ಲಾಪುರದಲ್ಲಿಯೂ ಆತಂಕ