Asianet Suvarna News Asianet Suvarna News

ಇಬ್ರಾಹಿಂ ಏನೇ ಹೇಳಿದ್ರೂ ನನಗೆ ವಿಶ್ ಮಾಡಿದಂತೆ, ಆತ ನನ್ನ ಕ್ಲೋಸ್ ಫ್ರೆಂಡ್: ಸಿದ್ದರಾಮಯ್ಯ

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ (Siddaramaiah) ತಬ್ಬಲಿ ಎಂದಿದ್ದ ಸಿ ಎಂ ಇಬ್ರಾಹಿಂಗೆ (CM Ibrahim) ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. 'ಜನರ ಪ್ರೀತಿ ವಿಶ್ವಾಸ ಇರುವವರೆಗೂ ನಾನು ತಬ್ಬಲಿ ಅಲ್ಲ, ಜನ ನಮ್ಮನ್ನು ತಬ್ಬಲಿ ಮಾಡಬೇಕಷ್ಟೇ, ಅದು ಜನರ ಕೈಯಲ್ಲಿದೆ' ಎಂದು ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ. 
 

ಬೆಂಗಳೂರು (ಜ. 28): ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ (Siddaramaiah) ತಬ್ಬಲಿ ಎಂದಿದ್ದ ಸಿ ಎಂ ಇಬ್ರಾಹಿಂಗೆ (CM Ibrahim) ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. 'ಜನರ ಪ್ರೀತಿ ವಿಶ್ವಾಸ ಇರುವವರೆಗೂ ನಾನು ತಬ್ಬಲಿ ಅಲ್ಲ, ಜನ ನಮ್ಮನ್ನು ತಬ್ಬಲಿ ಮಾಡಬೇಕಷ್ಟೇ, ಅದು ಜನರ ಕೈಯಲ್ಲಿದೆ' ಎಂದು ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ. 

ಇಬ್ರಾಹಿಂ ಕೋಪದಲ್ಲಿ ಪಕ್ಷ ಬಿಡುವ ಮಾತನಾಡಿದ್ಧಾರೆ. ಅವರ ಕೋಪ ಕಡಿಮೆ ಆಗಲಿ, ಭೇಟಿಯಾಗಿ ಮಾತನಾಡುವೆ. ಇಬ್ರಾಹಿಂ ಏನೇ ಮಾತಾಡಿದ್ರೂ ನನಗೆ ವಿಶ್ ಮಾಡಿದಂತೆ. ಆತ ನನ್ನ ಕ್ಲೋಸ್ ಫ್ರೆಂಡ್' ಎಂದಿದ್ದಾರೆ. 

‘ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಲ್ಲಿ ಸೋಲುತ್ತಾರೆ ಎಂದು ಸಿದ್ದರಾಮಯ್ಯ ಅವರನ್ನು ಬಾದಾಮಿಗೆ ಕರೆದೊಯ್ದು ನಾನೇ ನಾಮಪತ್ರ ಸಲ್ಲಿಸಿದ್ದೆ. ಬಾದಾಮಿಯಲ್ಲಿ ಗೆದ್ದಿದ್ದರಿಂದ ರಾಜಕೀಯವಾಗಿ ಅವರು ಉಳಿಯಲು ಸಹಕಾರಿಯಾಯಿತು. ಈಗ ಅವರೇ ಈ ಉಡುಗೊರೆ ಕೊಟ್ಟಿದ್ದಾರೆ. ಇನ್ನು ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರ ಸ್ಥಿತಿ ತಬ್ಬಲಿ ನೀನಾದೆ ಮಗನೆ ಅಂತಾಗಿದೆ’ ಎಂದು ಇಬ್ರಾಹಿಂ ಹೇಳಿದ್ದರು. 

Video Top Stories