Asianet Suvarna News Asianet Suvarna News

ಟೆಂಡರ್ ವಿವಾದ & ಮಾತಿನ ಸಮರ: ಇಬ್ಬರು IPS ಅಧಿಕಾರಗಳ ವಿರುದ್ಧ ಕ್ರಮ?

ಬೆಂಗಳೂರು ಸೇಫ್ಟಿ ಪ್ರಾಜೆಕ್ಟ್ ಟೆಂಡರ್ ವಿವಾದ ಇನ್ನೂ ಬಗೆಹರಿದಿಲ್ಲ.  ಇಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿವಾದದ ಬಗ್ಗೆ ಚರ್ಚೆಯಾಗಲಿದೆ. 
 

ಬೆಂಗಳೂರು (ಡಿ. 28): ಸೇಫ್ಟಿ ಪ್ರಾಜೆಕ್ಟ್ ಟೆಂಡರ್ ವಿವಾದ ಇನ್ನೂ ಬಗೆಹರಿದಿಲ್ಲ.  ಇಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿವಾದದ ಬಗ್ಗೆ ಚರ್ಚೆಯಾಗಲಿದೆ. 

ನಿರ್ಭಯಾ ಯೋಜನೆ ಟೆಂಡರ್‌ಗೆ ಸಂಬಂಧಿಸಿದಂತೆ ಟೆಂಡರ್‌ ಆಹ್ವಾನ ಸಮಿತಿ ಅಧ್ಯಕ್ಷ ಹೇಮಂತ್‌ ನಿಂಬಾಳ್ಕರ್‌ ಅವರು ಸರ್ಕಾರಕ್ಕೆ ಮತ್ತು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ರಾಜ್ಯ ಗೃಹ ಕಾರ್ಯದರ್ಶಿ ಡಿ.ರೂಪಾ ಆರೋಪ ಮಾಡಿದ್ದಾರೆ.  ‘ಇ-ಟೆಂಡ​ರ್‌​ ಪ್ರಕ್ರಿಯೆ ಅತ್ಯಂತ ಪಾರ​ದ​ರ್ಶಕ ಹಾಗೂ ಪಕ್ಷಾ​ತೀ​ತ​ವಾಗಿ ನಡೆ​ಯು​ತ್ತಿದೆ. ಇ-ಟೆಂಡ​ರ್‌​ನ​ಲ್ಲಿ ​ಬಿ​ಇ​ಎ​ಲ್‌ ಕಂಪನಿಯನ್ನು ಅನ​ರ್ಹ​ಗೊ​ಳಿ​ಸ​ಲಾ​ಗಿತ್ತು ಎಂಬುದು ಸುಳ್ಳು. ವಾಸ್ತ​ವ​ವಾಗಿ ಯೋಜ​ನೆಗೆ ಸಂಬಂಧಿ​ಸಿ​ದಂತೆ ಇದು​ವ​ರೆಗೂ ಮೂರು ಟೆಂಡರ್‌ ಕರೆ​ಯ​ಲಾ​ಗಿದೆ. ಎಂದು  ಹೆಚ್ಚುವರಿ ಪೊಲೀಸ್‌ ಆಯುಕ್ತ (ಆಡಳಿತ) ಹೇಮಂತ್‌ ನಿಂಬಾಳ್ಕರ್‌ ಹೇಳಿದ್ದಾರೆ.  ಈ ವಿವಾದ ಮುಗಿಯುವವರೆಗೆ ಇಬ್ಬರನ್ನೂ ಕಡ್ಡಾಯ ರಜೆಯ ಮೇರೆಗೆ ಕಳುಹಿಸ್ತಾರಾ..? ಸಭೆಯ ನಂತರ ನಿರ್ಧಾರ ಹೊರಬೀಳಲಿದೆ.