Asianet Suvarna News Asianet Suvarna News

ವಿದೇಶದಿಂದ ಮರಳಿದವರ ಕ್ವಾರಂಟೈನ್‌ಗೆ ಜನರ ಅಡ್ಡಿ, ಪ್ರತಿಭಟನೆ!

ಭಾರತಕ್ಕೆ ಮರಳಿರುವ ವಿದೇಶಿಗರ ಕ್ವಾರಂಟೈನ್‌ ಮಾಡಲು ಆರ್‌ ಆರ್‌ ನಗರದ ಜನರು ಅಡ್ಡಿಪಡಿಸಿದ್ದಾರೆ. ಅವರನ್ನು ಈ ಪ್ರದೇಶದಲ್ಲಿ ಕ್ವಾರಂಟೈನ್‌ ಮಾಡಬಾರದೆಂದು ಆಗ್ರಹಿಸಿದ್ದಾರೆ.

ಭಾರತಕ್ಕೆ ಮರಳಿರುವ ವಿದೇಶಿಗರ ಕ್ವಾರಂಟೈನ್‌ ಮಾಡಲು ಆರ್‌ ಆರ್‌ ನಗರದ ಜನರು ಅಡ್ಡಿಪಡಿಸಿದ್ದಾರೆ. ಅವರನ್ನು ಈ ಪ್ರದೇಶದಲ್ಲಿ ಕ್ವಾರಂಟೈನ್‌ ಮಾಡಬಾರದೆಂದು ಆಗ್ರಹಿಸಿದ್ದಾರೆ.

ಕೊರೋನಾ ಹಾವಳಿ ನಡುವೆ ವಿದೇಶದಲ್ಲಿ ಸಿಲುಕಿದ್ದ ಆರತೀಯರನ್ನು ಮರಳಿ ದೇಶಕ್ಕೆ ಕರೆ ತರಲಾಗುತ್ತಿದೆ. ಹೀಗಿರುವಾಗ ವಿದೇಶದಿಂದ ಬಂದವರಿಗೆ ಕ್ವಾರಂಟೈನ್‌ ಮಾಡಲಾಗುತ್ತಿದ್ದು, ಇದಕ್ಕಾಗಿ ಬೆಂಗಲೂರಿನ ಆರ್. ಆರ್‌. ನಗರದಲ್ಲಿ ಸರ್ಕಾರ ವ್ಯವಸ್ಥೇ ಮಾಡಲಾಗಿತ್ತು..

ಆದದರೀಗ ಈ ನಡೆಯಿಂದ ಇಲ್ಲಿನ ಸ್ಥಳೀಯರು ಅಸಮಾಧಾನಗೊಂಡಿದ್ದು, ಅವರನ್ನು ಇಲ್ಲಿ ಕ್ವಾರಂಟೈನ್‌ ಮಾಡಬೇಡಿ. ಬೇರೆಲ್ಲಾದರೂ ಕರೆದೊಯ್ಯಿರಿ ಎಂದು ಆಗ್ರಹಿಸಿದ್ದಾರೆ. ಅಲ್ಲದೇ ಈ ನಿಟ್ಟಿನಲ್ಲಿ ಪ್ರತಿಭಟನೆಯನ್ನೂ ಮಾಡಿದ್ದಾರೆ.