ಕುತೂಹಲ ಮೂಡಿಸಿದೆ ಜಾರಕಿಹೊಳಿ ಮುಂಬೈ ಭೇಟಿ, 'ಮಹಾ' ನಾಯಕರ ಜೊತೆ ಸೀಕ್ರೆಟ್ ಚರ್ಚೆ..?
ರಮೇಶ್ ಜಾರಕಿಹೊಳಿ ದಿಢೀರ್ ದೆಹಲಿ ಭೇಟಿ ಕುತೂಹಲ ಮೂಡಿಸಿದೆ. ಮಹಾರಾಷ್ಟ್ರ ಬಿಜೆಪಿ ನಾಯಕರ ಭೇಟಿಯ ಹಿಂದಿನ ಮರ್ಮವೇನು..?
ಬೆಂಗಳೂರು (ಜೂ. 22): ರಮೇಶ್ ಜಾರಕಿಹೊಳಿ ದಿಢೀರ್ ದೆಹಲಿ ಭೇಟಿ ಕುತೂಹಲ ಮೂಡಿಸಿದೆ. ಸೀಡಿ ಕೇಸ್ ವಿಚಾರದಲ್ಲಿ ಸರ್ಕಾರದ ವಿರುದ್ಧ ರಮೇಶ್ ಜಾರಕಿಹೊಳಿಗೆ ಮುನಿಸಿದೆ.
'ದಿಲ್ಲಿ ನಾಯಕರು ಬಂದಿದ್ದರು ಅಂಥ ಬಂದಿದ್ದೆ, ರಾಜಕಾರಣದ ಬಗ್ಗೆ ಮಾತಾಡಲ್ಲ'
'ಸೀಡಿ ರಿಲೀಸ್ ಅಗುವ ವಿಚಾರ ಸರ್ಕಾರದ ಪ್ರಮುಖರಿಗೆ ಗೊತ್ತಿತ್ತು. ಸೀಡಿ ರಿಲೀಸ್ ಆಗಲಿ ಎಂದು ಕಾಯುತ್ತಿದ್ದರು. ಬಿಜೆಪಿ ಸರ್ಕಾರ ರಚನೆಗೆ ನಾನು ಕಾರಣನಾದೆ. ಅದರೆ ನಮ್ಮವರೇ ನನಗೆ ಮೋಸ ಮಾಡಿದ್ರು' ಎಂದು ಮಹಾರಾಷ್ಟ್ರ ಬಿಜೆಪಿ ನಾಯಕರ ಎದುರು ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.