Asianet Suvarna News Asianet Suvarna News

ಲಾಕ್‌ಡೌನ್ ಫಿಕ್ಸಾ? ಕುತೂಹಲ ಮೂಡಿಸಿದೆ ಸಂಸದ, ಕಾರ್ಪೋರೇಟರ್‌ಗಳ ಜೊತೆ ಸಿಎಂ ಸಭೆ

ಸಂಸದ, ಶಾಸಕರು ಹಾಗೂ ಕಾರ್ಪೋರೇಟರ್ ಜೊತೆ ಬೆಂಗಳೂರು ದಕ್ಷಿಣ ಉಸ್ತುವಾರಿ ಆರ್ ಅಶೋಕ್ ಸಭೆ ನಡೆಸಿದ್ದಾರೆ. ಲಾಕ್‌ಡೌನ್ ಬಗ್ಗೆ ಚರ್ಚೆ ನಡೆಸಿರುವ ಸಾಧ್ಯತೆ ಇದೆ. ಇನ್ನೊಂದು ಕಡೆ ಡಿಸಿಎಂ ಅಶ್ವಥ್ ನಾರಾಯಣ್ ಕೂಡಾ ಕಾರ್ಪೋರೇಟರ್‌ಗಳ ಜೊತೆ ಸಭೆ ನಡೆಸಿದ್ದಾರೆ. 

ಬೆಂಗಳೂರು (ಜು. 11): ಸಂಸದ, ಶಾಸಕರು ಹಾಗೂ ಕಾರ್ಪೋರೇಟರ್ ಜೊತೆ ಬೆಂಗಳೂರು ದಕ್ಷಿಣ ಉಸ್ತುವಾರಿ ಆರ್ ಅಶೋಕ್ ಸಭೆ ನಡೆಸಿದ್ದಾರೆ. ಲಾಕ್‌ಡೌನ್ ಬಗ್ಗೆ ಚರ್ಚೆ ನಡೆಸಿರುವ ಸಾಧ್ಯತೆ ಇದೆ. ಇನ್ನೊಂದು ಕಡೆ ಡಿಸಿಎಂ ಅಶ್ವಥ್ ನಾರಾಯಣ್ ಕೂಡಾ ಕಾರ್ಪೋರೇಟರ್‌ಗಳ ಜೊತೆ ಸಭೆ ನಡೆಸಿದ್ದಾರೆ. 

ಭಾನುವಾರದ ಜೊತೆ ಶನಿವಾರವೂ ಲಾಕ್‌ಡೌನ್?

ಸೋಂಕಿತರಿಗೆ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ ಮಾಡಬೇಕು. ಶಾಸಕರಿಗೆ ಬೆಡ್ ವ್ಯವಸ್ಥೆ ಬಗ್ಗೆ ಮಾಹಿತಿ ಇರಬೇಕು. ವಾರ್ಡ್‌ವಾರು ಹತ್ತು ವಾಲೆಂಟಿಯರ್‌ ನೇಮಕ ಮಾಡಲಾಗಿದೆ.  ಅವರು ಸೋಂಕಿತರ ಸಂಪರ್ಕದಲ್ಲಿರುತ್ತಾರೆ. ತರಕಾರಿ, ತಿಂಡಿ ಇತ್ಯಾದಿ ವ್ಯವಸ್ಥೆ ಮಾಡುತ್ತಾರೆ ಎಂದು ಆರ್ ಅಶೋಕ್ ಹೇಳಿದ್ದಾರೆ. ಶನಿವಾರ ಲಾಕ್‌ಡೌನ್ ಬಗ್ಗೆ, ಈ ಬಗ್ಗೆ  ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಮುಖ್ಯಮಂತ್ರಿಗಳು ನಿರ್ಧರಿಸುತ್ತಾರೆ. ಅಲ್ಲಿಯವರೆಗೆ ಶನಿವಾರ ಲಾಕ್‌ಡೌನ್ ಇರುವುದಿಲ್ಲ' ಎಂದು ಆರ್ ಅಶೋಕ್ ಹೇಳಿದ್ದಾರೆ. 

 

Video Top Stories