Asianet Suvarna News Asianet Suvarna News

ಅಭಿಮಾನಿಗಳಿಗೆ ಊಟ ಬಡಿಸಿದ ಶಿವಣ್ಣ- ಅಶ್ವಿನಿ, ಫ್ಯಾನ್ಸ್ ಪ್ರೀತಿಗೆ ನಮಸ್ಕಾರ ಹೇಳಿದ ರಾಘಣ್ಣ!

ಅರಮನೆ ಮೈದಾನದಲ್ಲಿ ಅಪ್ಪು ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಇಟ್ಟುಕೊಳ್ಳಲಾಗಿದೆ. ಅಭಿಮಾನಿಗಳ ದಂಡೇ ಹರಿದು ಬರುತ್ತಿದೆ. ಅಭಿಮಾನಿಗಳಿಗೆ ಶಿವಣ್ಣ- ಅಶ್ವಿನಿ ಊಟ ಬಡಿಸಿದರು. 

ಬೆಂಗಳೂರು (ನ. 09): ಅರಮನೆ ಮೈದಾನದಲ್ಲಿ (Palace Ground) ಅಪ್ಪು ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಇಟ್ಟುಕೊಳ್ಳಲಾಗಿದೆ. ಅಭಿಮಾನಿಗಳ ದಂಡೇ ಹರಿದು ಬರುತ್ತಿದೆ. ಅಭಿಮಾನಿಗಳಿಗೆ ಶಿವಣ್ಣ- ಅಶ್ವಿನಿ ಊಟ ಬಡಿಸಿದರು. 

ಅಪ್ಪು ಆಸೆಯಂತೆ ಸಾವಿರಾರು ಅಭಿಮಾನಿಗಳಿಗೆ ಇಂದು ಅನ್ನ ಸಂತರ್ಪಣೆ, ಅಭಿಮಾನಿಗಳ ಕ್ಯೂ..!

ಇದೇ ಸಂದರ್ಭದಲ್ಲಿ ಮಾತನಾಡಿದ ರಾಘವೇಂದ್ರ ರಾಜ್‌ಕುಮಾರ್, 'ಅಭಿಮಾನಿಗಳಿಗೆ ಊಟ ಹಾಕಿಸಬೇಕು ಎಂದು ಅಪ್ಪು ಆಸೆಪಟ್ಟಿದ್ದರು. ಅವರ ಆಸೆಯಂತೆ ಇಂದು ನಾವು ಊಟ ಹಾಕಿಸುತ್ತಿದ್ದೇವೆ. ನಮ್ಮ ನೋವುಗಳಲ್ಲಿ ನೀವೂ ಭಾಗಿಯಾಗಿದ್ದೀರಿ. ನಿಮಗೆ ಸಾಷ್ಟಾಂಗ ನಮಸ್ಕಾರಗಳು. ಅಪ್ಪು ಅವರ ಆದರ್ಶ ನಮ್ಮ ಜೊತೆಗೆ ಇರುತ್ತದೆ.