ಸಂಸ್ಕಾರಕ್ಕೆ ತೆರಳುವ ಅರ್ಚಕರಿಗೆ ಪೊಲೀಸರ ಅಡ್ಡಿ, ಪುರೋಹಿತ ಸಂಘದಿಂದ ಸರ್ಕಾರಕ್ಕೆ ಮನವಿ
ಕೋವಿಡ್ನಿಂದ ಮೃತಪಟ್ಟವರ ಅಂತ್ಯಸಂಸ್ಕಾರದ ವೇಳೆ ಧಾರ್ಮಿಕ ವಿಧಿವಿಧಾನಗಳನ್ನು ನಡೆಸದಂತೆ ಅರ್ಚರಿಗೆ ಪೊಲೀಸರಿಂದ ತಡೆ ವಿಚಾರವಾಗಿ, ಬ್ರಾಹ್ಮಣ ಪುರೋಹಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ಬೇಸರ ವ್ಯಕ್ತಪಡಿಸಿದೆ.
ಬೆಂಗಳೂರು (ಮೇ. 26): ಕೋವಿಡ್ನಿಂದ ಮೃತಪಟ್ಟವರ ಅಂತ್ಯಸಂಸ್ಕಾರದ ವೇಳೆ ಧಾರ್ಮಿಕ ವಿಧಿವಿಧಾನಗಳನ್ನು ನಡೆಸದಂತೆ ಅರ್ಚರಿಗೆ ಪೊಲೀಸರಿಂದ ತಡೆ ವಿಚಾರವಾಗಿ, ಬ್ರಾಹ್ಮಣ ಪುರೋಹಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ಬೇಸರ ವ್ಯಕ್ತಪಡಿಸಿದೆ. ಸರ್ಕಾರ ಅಂತ್ಯಸಂಸ್ಕಾರಕ್ಕೆ ತೆರಳಲು ಅವಕಾಶ ನೀಡಿದರೂ ಪೊಲೀಸರು ಅಡ್ಡಿಪಡಿಸುತ್ತಾರೆ. ನಮ್ಮನ್ನು ಬಿಡುವಂತೆ ಸರ್ಕಾರ ಪೊಲೀಸ್ ಇಲಾಖೆಗೆ ಸೂಚಿಸುವಂತೆ ಪುರೋಹಿತರು ಮನವಿ ಮಾಡಿದ್ಧಾರೆ.