ಲಾಕ್ಡೌನ್ ವಿಸ್ತರಣೆಗೆ ಆಂಧ್ರದ ವಿರೋಧ; ಮೋದಿ ಅಂಗಳದಲ್ಲಿ ಲಾಕ್ಡೌನ್ ಚೆಂಡು..!
ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ನಡೆಸುತ್ತಿದ್ದಾರೆ. ಲಾಕ್ಡೌನ್ ವಿಸ್ತರಿಸಬೇಕಾ, ಬೇಡವಾ ಅನ್ನೋದ್ರ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಲಾಕ್ಡೌನ್ ಮುಂದುವರಿಕೆಗೆ ಆಂಧ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕೊರೊನಾ ಜೊತೆಯೇ ಬದುಕಬೇಕು, ಬದುಕುವುದನ್ನು ಕಲಿಯಬೇಕು. ನಾವು ಅದಷ್ಟು ಬೇಗ ಸಹಜ ಸ್ಥಿತಿಗೆ ಮರಳಲೇಬೇಕು. ಲಾಕ್ಡೌನ್ ಮುಮದುವರೆದರೆ ನಿರುದ್ಯೋಗ ಸಮಸ್ಯೆ ಹೆಚ್ಚಳವಾಗಲಿದೆ ಎಂದಿದ್ದಾರೆ.
ಬೆಂಗಳೂರು (ಮೇ. 11): ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ನಡೆಸುತ್ತಿದ್ದಾರೆ. ಲಾಕ್ಡೌನ್ ವಿಸ್ತರಿಸಬೇಕಾ, ಬೇಡವಾ ಅನ್ನೋದ್ರ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಲಾಕ್ಡೌನ್ ಮುಂದುವರಿಕೆಗೆ ಆಂಧ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕೊರೊನಾ ಜೊತೆಯೇ ಬದುಕಬೇಕು, ಬದುಕುವುದನ್ನು ಕಲಿಯಬೇಕು. ನಾವು ಅದಷ್ಟು ಬೇಗ ಸಹಜ ಸ್ಥಿತಿಗೆ ಮರಳಲೇಬೇಕು. ಲಾಕ್ಡೌನ್ ಮುಂದುವರೆದರೆ ನಿರುದ್ಯೋಗ ಸಮಸ್ಯೆ ಹೆಚ್ಚಳವಾಗಲಿದೆ ಎಂದಿದ್ದಾರೆ.
ಇಂದು 10 ಪಾಸಿಟೀವ್ ಕೇಸ್; ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 858 ಕ್ಕೆ ಏರಿಕೆ
ಪ. ಬಂ ಸಿಎಂ ಮಮತಾ ಬ್ಯಾನರ್ಜಿ ಕೇಂದ್ರದ ವಿರುದ್ಧ ಗುಡುಗಿದ್ದಾರೆ. ಕೊರೊನಾ ತಡೆಗೆ ನಾವು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೀವಿ. ಆದರೆ ಕೇಂದ್ರ ಸರ್ಕಾರ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ. ಪ. ಬಂಗಾಳವನ್ನು ಬೇರೆ ರೀತಿ ನೋಡಲಾಗುತ್ತಿದೆ' ಎಂದಿದ್ದಾರೆ.