Asianet Suvarna News Asianet Suvarna News

' ಉ.ಕರ್ನಾಟಕ ಅಭಿವೃದ್ಧಿಗಾಗಿ ಯತ್ನಾಳ್ ಮಾತನಾಡಿದ್ದಾರೆ, ಅವರ ಮಾತಿನಲ್ಲಿ ತಪ್ಪಿಲ್ಲ'

ಶಾಸಕರ ಜೊತೆ ಸಿಎಂ ನಡೆಸಿದ ಸಭೆಯಲ್ಲಿ ಯತ್ನಾಳ್ ಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಬಹಿರಂಗವಾಗಿ ಮಾತನಾಡಿದ್ದು ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು (ಜ. 05): ಶಾಸಕರ ಜೊತೆ ಸಿಎಂ ನಡೆಸಿದ ಸಭೆಯಲ್ಲಿ ಯತ್ನಾಳ್ ಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಬಹಿರಂಗವಾಗಿ ಮಾತನಾಡಿದ್ದು ಚರ್ಚೆಗೆ ಕಾರಣವಾಗಿದೆ.

ಸಿಎಂ ವಿರುದ್ಧ ಮಾತಾಡೋ ಶಾಸಕರಿಗೆ ರೇಣುಕಾಚಾರ್ಯ ವಾರ್ನ್

'ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ತಮ್ಮ ಕ್ಷೇತ್ರಕ್ಕಾಗಿ ಅಷ್ಟೇ ಮಾತನಾಡಿಲ್ಲ. ಈ ಹಿಂದೆ ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆಯೂ ಆಗಿನ ಪ್ರಧಾನಿ ವಾಜಪೇಯಿಯವರಿಗೂ ಮನವರಿಕೆ ಮಾಡಿಸಿದ್ದರು. ಯತ್ನಾಳ್ ಸ್ವಾರ್ಥಕ್ಕಾಗಿ ಎಂದು ಮಾತನಾಡಿಲ್ಲ. ಇಡೀ ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಮಾತನಾಡಿದ್ದಾರೆ' ಎಂದು ಪಂಚಮಸಾಲಿ ಪೀಠಾಧ್ಯಕ್ಷ ಜಯ ಬಸವಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. 

Video Top Stories