ಒಂದು ವಾರ್ಡ್ಗೆ ಒಂದು ಗಣೇಶ, ಪೈಪೋಟಿ ತಪ್ಪಿಸಲು ಬಿಬಿಎಂಪಿಯಿಂದ ಸಖತ್ ಐಡ್ಯಾ..!
ಈ ಬಾರಿ ಒಂದು ಒಂದು ವಾರ್ಡ್ಗೆ ಒಂದು ಗಣೇಶ ಎನ್ನುವ ರೂಲ್ಸ್ ತಂದಿದ್ದು, ಗೊಂದಲಕ್ಕೆ ಕಾರಣವಾಗಿದೆ. ವಾರ್ಡ್ನಲ್ಲಿ ಗಣೇಶ ಕೂರಿಸಲು ಸಂಘ ಸಂಸ್ಥೆಗಳು ಪೈಪೋಟಿಗಿಳಿದಿವೆ.
ಬೆಂಗಳೂರು (ಸೆ. 09): ಈ ಬಾರಿ ಒಂದು ಒಂದು ವಾರ್ಡ್ಗೆ ಒಂದು ಗಣೇಶ ಎನ್ನುವ ರೂಲ್ಸ್ ತಂದಿದ್ದು, ಗೊಂದಲಕ್ಕೆ ಕಾರಣವಾಗಿದೆ. ವಾರ್ಡ್ನಲ್ಲಿ ಗಣೇಶ ಕೂರಿಸಲು ಸಂಘ ಸಂಸ್ಥೆಗಳು ಪೈಪೋಟಿಗಿಳಿದಿವೆ. ಈ ಪೈಪೋಟಿ ತಪ್ಪಿಸಲು ಬಿಬಿಎಂಪಿ ಪೊಲೀಸ್ ಇಲಾಖೆ ಲಾಟರಿ ಎತ್ತುವ ತೀರ್ಮಾನ ತೆಗೆದುಕೊಂಡಿದೆ. ಚೀಟಿ ಎತ್ತುವ ಮೂಲಕ ಗಣೇಶನನ್ನು ಯಾರು ಕೂರಿಸಬೇಕು ಎಂದು ಹೇಳಲಾಗುತ್ತದೆ. ನಿನ್ನೆ ಯಲಹಂಕದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ.