ಬಸವಣ್ಣನ ಪರುಷಕಟ್ಟೆ ಎದುರು ಮದರಸಾ ಬೇಡ: ಸರ್ಕಾರದ ವಿರುದ್ಧ ಆಂದೋಲಾ ಶ್ರೀ ಕಿಡಿ
ಬಸವಣ್ಣನ ಭೂಮಿಯಲ್ಲಿ ಮದರಸಾ ನಿರ್ಮಾಣ ಬೇಡ ಎಂದು ಸರ್ಕಾರದ ವಿರುದ್ಧ ಹಿಂದೂ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ. ಬಸವಕಲ್ಯಾಣದ ಪರುಷಕಟ್ಟೆ ಬಳಿ ಮದರಸಾ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಇದಕ್ಕೆ ವಿರೋಧ ವ್ಯಕ್ತವಾಗಿದೆ.
ಬೀದರ್ (ಏ. 10): ಬಸವಣ್ಣನ ಭೂಮಿಯಲ್ಲಿ ಮದರಸಾ ನಿರ್ಮಾಣ ಬೇಡ ಎಂದು ಸರ್ಕಾರದ ವಿರುದ್ಧ ಹಿಂದೂ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ. ಬಸವಕಲ್ಯಾಣದ ಪರುಷಕಟ್ಟೆ ಬಳಿ ಮದರಸಾ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಇದಕ್ಕೆ ವಿರೋಧ ವ್ಯಕ್ತವಾಗಿದೆ.
ಮುಸ್ಲಿಂ ಅಂಗಡಿಗಳ ತೆರವು ಹೀನ ಕೃತ್ಯ, ಸರ್ಕಾರ ಕ್ರಮ ಕೈಗೊಳ್ಳಬೇಕು: ಎಚ್ಡಿಕೆ ಒತ್ತಾಯ
ಪರುಷಕಟ್ಟೆ ಅಭಿವೃದ್ಧಿಗೆ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದರು. ಮದರಸಾ ನಿರ್ಮಾಣ ಸೇರಿ ಪರುಷಕಟ್ಟೆ ಅಭಿವೃದ್ಧಿಗೆ ಸರ್ಕಾರ 1 ಕೋಟಿ ರೂ ಅನುದಾನ ಬಿಡುಗಡೆ ಮಾಡಿತ್ತು. ಇದಕ್ಕೆ ಶ್ರೀರಾಮಸೇನೆಯಿಂದ ವಿರೋಧ ವ್ಯಕ್ತವಾಗಿದೆ. ಮದರಸಾ ನಿರ್ಮಾಣಕ್ಕೆ ಬಿಡಲ್ಲ ಎಂದಿದ್ದಾರೆ.