Covid Tough Rules: ರಾಜ್ಯದಲ್ಲಿ ರಿಲೀಫ್ ಸುಳಿವು ಕೊಟ್ಟ ಸಚಿವ ಆರ್ ಅಶೋಕ್
ಸೋಂಕು ಕಡಿಮೆಯಾದರೆ ಈಗಿರುವ ನಿರ್ಬಂಧಗಳನ್ನು ತೆರವುಗೊಳಿಸುತ್ತೇವೆ. ವೀಕೆಂಡ್ ಕರ್ಫ್ಯೂ (Weekend Curfew) ಲಾಕ್ಡೌನ್ (Lockdown) ಮಾಡಲು ನಮಗೂ ಇಷ್ಟವಿಲ್ಲ. ಲಾಕ್ಡೌನ್ ವಿಚಾರ ನಮ್ಮ ಮುಂದಿಲ್ಲ. ಆದರೆ ಜನರ ಆರೋಗ್ಯದ ಜವಾಬ್ದಾರಿ ನಮ್ಮ ಮೇಲಿದೆ: ಅಶೋಕ್
ಬೆಂಗಳೂರು (ಜ. 17): ಸೋಂಕು ಕಡಿಮೆಯಾದರೆ ಈಗಿರುವ ನಿರ್ಬಂಧಗಳನ್ನು ತೆರವುಗೊಳಿಸುತ್ತೇವೆ. ವೀಕೆಂಡ್ ಕರ್ಫ್ಯ (Weekend Curfew) ಲಾಕ್ಡೌನ್ (Lockdown) ಮಾಡಲು ನಮಗೂ ಇಷ್ಟವಿಲ್ಲ. ಲಾಕ್ಡೌನ್ ವಿಚಾರ ನಮ್ಮ ಮುಂದಿಲ್ಲ. ಆದರೆ ಜನರ ಆರೋಗ್ಯದ ಜವಾಬ್ದಾರಿ ನಮ್ಮ ಮೇಲಿದೆ. ಹಾಗಾಗಿ ಅನಿವಾರ್ಯವಾಗಿದೆ. ಸಿಎಂ ಇಂದಿನ ಸಭೆಯಲ್ಲಿ ಇವೆಲ್ಲದರ ಬಗ್ಗೆ ಚರ್ಚಿಸಲಿದ್ದೇವೆ. ಕೋವಿಡ್ ಸೋಂಕು ಇಳಿಯುತ್ತಿದೆ ಎಂದು ತಜ್ಞರು ಹೇಳುತ್ತಿದ್ದಾರೆ' ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.