ಕೇಂದ್ರ ಸಚಿವ ಸಂಪುಟ ಪುನಾರಚನೆ: ಕರ್ನಾಟಕದಿಂದ ರೇಸ್ನಲ್ಲಿದ್ದಾರೆ ಈ ಸಂಸದರು
ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟ ವಿಸ್ತರಣೆಗೆ ಸಮಯ ನಿಗದಿಯಾಗಿದೆ. ಜುಲೈ 8 ರ ಬೆಳಿಗ್ಗೆ 10.30 ಕ್ಕೆ ಕ್ಯಾಬಿನೆಟ್ ಪುನಾರಚನೆಯಾಗಲಿದೆ ಎಂದು ಅಧಿಕೃತ ಮಾಹಿತಿ ಹೊರಬಿದ್ದಿದೆ.
ಬೆಂಗಳೂರು (ಜು. 06): ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟ ವಿಸ್ತರಣೆಗೆ ಸಮಯ ನಿಗದಿಯಾಗಿದೆ. ಜುಲೈ 8 ರ ಬೆಳಿಗ್ಗೆ 10.30 ಕ್ಕೆ ಕ್ಯಾಬಿನೆಟ್ ಪುನಾರಚನೆಯಾಗಲಿದೆ ಎಂದು ಅಧಿಕೃತ ಮಾಹಿತಿ ಹೊರಬಿದ್ದಿದೆ. ರಾಷ್ಟ್ರಪತಿ ಭವನಕ್ಕೆ ನೂತನ ಸಚಿವರ ಪಟ್ಟಿ ರವಾನೆಯಾಗಿದೆ. ಕರ್ನಾಟಕದ 2-3 ಸಂಸದರಿಗೆ ಮಂತ್ರಪಟ್ಟ ಸಿಗುವ ಸಾಧ್ಯತೆ ಇದೆ. ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ, ಭಗವಂತ ಖುಬಾ, ನಾರಾಯಣ ಸ್ವಾಮಿ, ಬಿವೈ ರಾಘವೇಂದ್ರ ಹೆಸರು ರೇಸ್ನಲ್ಲಿದೆ ಎನ್ನಲಾಗಿದೆ. ಪ್ರಾದೇಶಿಕ, ಪಕ್ಷ ನಿಷ್ಠೆ, ಸೇವೆ ನೋಡಿ ಮಣೆ ಹಾಕುವ ಸಾಧ್ಯತೆ ಇದೆ.