SSLC ಅಗ್ನಿಪರೀಕ್ಷೆ: ಧೈರ್ಯದಿಂದ ಬನ್ನಿ, ಆತಂಕ ಬಿಟ್ಟು ಪರೀಕ್ಷೆ ಬರೀರಿ, ಸಚಿವ ಸುರೇಶ್ ಕುಮಾರ್
ರಾಜ್ಯಾದ್ಯಂತ ಗಣಿತ ಪರೀಕ್ಷೆ ನಡೆಯುತ್ತಿದ್ದು, ಇಂದು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು| ಸುಮಾರು 8 ಲಕ್ಷದ 8 ಸಾವಿರ ವಿದ್ಯಾರ್ಥಿಗಳು ಗಣಿತ ಪರೀಕ್ಷೆ ಬರೆಯುತ್ತಿದ್ದಾರೆ|
ಬೆಂಗಳೂರು(ಜೂ. 27): ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಇಂದು ಮಹತ್ವದ ದಿನವಾಗಿದೆ. ರಾಜ್ಯಾದ್ಯಂತ ಗಣಿತ ಪರೀಕ್ಷೆ ನಡೆಯುತ್ತಿದ್ದು, ಇಂದು ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.
ಆಸ್ಪತ್ರೆಗಳಿಗೆ ಹೋಗುವಾರ ಎಚ್ಚರ ; ವೈದ್ಯರು, ಸ್ಟಾಫ್ ನರ್ಸ್ಗಳಿಗೆ ತಗುಲುತ್ತಿದೆ ಸೋಂಕು
ಇಂದು ನಗರದ ಸೇಂಟ್ ಜೋಸೆಫ್ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಅವರು, ಸುಮಾರು 8ಲಕ್ಷದ 8 ಸಾವಿರ ವಿದ್ಯಾರ್ಥಿಗಳು ಗಣಿತ ಪರೀಕ್ಷೆ ಬರೆಯುತ್ತಿದ್ದಾರೆ. ಕೊರೋನಾ ವೈರಸ್ಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು, ಪೋಷಕರು ಹೆದರುವುದು ಬೇಡ ಎಂದು ಹೇಳಿದ್ದಾರೆ.