ಸಿಎಂ-ದೇವೇಗೌಡ್ರ ಭೇಟಿಗೆ ರಾಜಕೀಯ ಬಣ್ಣ ಬೇಡ, ಪ್ರೀತಂಗೌಡಗೆ ಮಾಧುಸ್ವಾಮಿ ಟಾಂಗ್.!
ಸಿಎಂ ಬೊಮ್ಮಾಯಿ- ದೇವೇಗೌಡರದ್ದು ಸೌಹಾರ್ದಯುತ ಭೇಟಿ. ನಮ್ಮ ಪಕ್ಷಕ್ಕೆ ಈಗ ಸಂಖ್ಯ ಕೊರತೆ ಇಲ್ಲ. ನಾವು ಯಾರ ಸಹಾಯವನ್ನೂ ಕೋರುವ ಸ್ಥಿತಿಯಿಲ್ಲ: ಮಾಧುಸ್ವಾಮಿ
ಬೆಂಗಳೂರು (ಆ. 10): ಸಿಎಂ ಬೊಮ್ಮಾಯಿ- ದೇವೇಗೌಡರ ಭೇಟಿ ಬಗ್ಗೆ ಬಿಜೆಪಿ ಶಾಸಕ ಪ್ರೀತಂ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ರೀತಿ ಮುಖ್ಯಮಂತ್ರಿಗಳು ದೇವೇಗೌಡರನ್ನು ಪದೇ ಪದೇ ಭೇಟಿಯಾಗುವುದು ಪಕ್ಷಕ್ಕೆ ಮುಜುಗರ ತರುವ ವಿಚಾರ ಎಂಬರ್ಥದ ಹೇಳಿಕೆ ಕೊಟ್ಟಿದ್ದರು. ಪ್ರೀತಂ ಗೌಡ ಹೇಳಿಕೆಗೆ ಮಾಧುಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಅರಮನೆಯಂಥಾ ಮನೆ ಕಟ್ಟಿದ್ಹೇಗೆ ಜಮೀರ್ ಸಾಹೇಬ್ರು..? ಸುವರ್ಣ ನ್ಯೂಸ್ ವರದಿಗೆ ಶಾಸಕರು ಗರಂ..!
'ಸಿಎಂ ಬೊಮ್ಮಾಯಿ- ದೇವೇಗೌಡರದ್ದು ಸೌಹಾರ್ದಯುತ ಭೇಟಿ. ನಮ್ಮ ಪಕ್ಷಕ್ಕೆ ಈಗ ಸಂಖ್ಯ ಕೊರತೆ ಇಲ್ಲ. ನಾವು ಯಾರ ಸಹಾಯವನ್ನೂ ಕೋರುವ ಸ್ಥಿತಿಯಿಲ್ಲ. ದೇವೇಗೌಡ್ರು, ಬೊಮ್ಮಾಯಿಯವರ ತಂದೆಯ ಸ್ನೇಹಿತರು. ಹಿರಿಯರು ಎಂಬ ಕಾರಣಕ್ಕೆ ಅವರನ್ನು ಭೇಟಿಯಾಗಿದ್ಧಾರೆ. ಇದರಲ್ಲಿ ತಪ್ಪು ತಿಳಿಯುವ ಅಗತ್ಯ ಇಲ್ಲವೆಂದು' ಹೇಳಿದ್ಧಾರೆ.