Asianet Suvarna News Asianet Suvarna News

ಸಿಎಂ-ದೇವೇಗೌಡ್ರ ಭೇಟಿಗೆ ರಾಜಕೀಯ ಬಣ್ಣ ಬೇಡ, ಪ್ರೀತಂಗೌಡಗೆ ಮಾಧುಸ್ವಾಮಿ ಟಾಂಗ್.!

ಸಿಎಂ ಬೊಮ್ಮಾಯಿ- ದೇವೇಗೌಡರದ್ದು ಸೌಹಾರ್ದಯುತ ಭೇಟಿ. ನಮ್ಮ ಪಕ್ಷಕ್ಕೆ ಈಗ ಸಂಖ್ಯ ಕೊರತೆ ಇಲ್ಲ. ನಾವು ಯಾರ ಸಹಾಯವನ್ನೂ ಕೋರುವ ಸ್ಥಿತಿಯಿಲ್ಲ: ಮಾಧುಸ್ವಾಮಿ

ಬೆಂಗಳೂರು (ಆ. 10): ಸಿಎಂ ಬೊಮ್ಮಾಯಿ- ದೇವೇಗೌಡರ ಭೇಟಿ ಬಗ್ಗೆ ಬಿಜೆಪಿ ಶಾಸಕ ಪ್ರೀತಂ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ರೀತಿ ಮುಖ್ಯಮಂತ್ರಿಗಳು ದೇವೇಗೌಡರನ್ನು ಪದೇ ಪದೇ ಭೇಟಿಯಾಗುವುದು ಪಕ್ಷಕ್ಕೆ ಮುಜುಗರ ತರುವ ವಿಚಾರ ಎಂಬರ್ಥದ ಹೇಳಿಕೆ ಕೊಟ್ಟಿದ್ದರು. ಪ್ರೀತಂ ಗೌಡ ಹೇಳಿಕೆಗೆ ಮಾಧುಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಅರಮನೆಯಂಥಾ ಮನೆ ಕಟ್ಟಿದ್ಹೇಗೆ ಜಮೀರ್ ಸಾಹೇಬ್ರು..? ಸುವರ್ಣ ನ್ಯೂಸ್‌ ವರದಿಗೆ ಶಾಸಕರು ಗರಂ..!

'ಸಿಎಂ ಬೊಮ್ಮಾಯಿ- ದೇವೇಗೌಡರದ್ದು ಸೌಹಾರ್ದಯುತ ಭೇಟಿ. ನಮ್ಮ ಪಕ್ಷಕ್ಕೆ ಈಗ ಸಂಖ್ಯ ಕೊರತೆ ಇಲ್ಲ. ನಾವು ಯಾರ ಸಹಾಯವನ್ನೂ ಕೋರುವ ಸ್ಥಿತಿಯಿಲ್ಲ. ದೇವೇಗೌಡ್ರು, ಬೊಮ್ಮಾಯಿಯವರ ತಂದೆಯ ಸ್ನೇಹಿತರು. ಹಿರಿಯರು ಎಂಬ ಕಾರಣಕ್ಕೆ ಅವರನ್ನು ಭೇಟಿಯಾಗಿದ್ಧಾರೆ. ಇದರಲ್ಲಿ ತಪ್ಪು ತಿಳಿಯುವ ಅಗತ್ಯ ಇಲ್ಲವೆಂದು' ಹೇಳಿದ್ಧಾರೆ. 

Video Top Stories