Asianet Suvarna News Asianet Suvarna News

ನಮಗೆ ನಿವೇಶನ ಕೊಡಿ ಸ್ವಾಮಿ...ಸಚಿವರ ಮುಂದೆ ಮಹಿಳೆಯರ ಕಣ್ಣೀರು

ಮಾಗಡಿಯ ಕುದೂರು ಮಳೆ ಹಾನಿ ಪ್ರದೇಶಗಳಿಗೆ ಸಚಿವ ಅಶ್ವತ್ಥ್ ನಾರಾಯಣ್ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಆಲಿಸಿದರು. ನಮಗೆ ನಿವೇಶನ ಕೊಡಿ ಎಂದು ಮಹಿಳೆಯರು ಕಣ್ಣೀರು ಹಾಕಿದ್ದಾರೆ. 

ಬೆಂಗಳೂರು (ಆ. 08): ಮಾಗಡಿಯ ಕುದೂರು ಮಳೆ ಹಾನಿ ಪ್ರದೇಶಗಳಿಗೆ ಸಚಿವ ಅಶ್ವತ್ಥ್ ನಾರಾಯಣ್ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಆಲಿಸಿದರು. ನಮಗೆ ನಿವೇಶನ ಕೊಡಿ ಎಂದು ಮಹಿಳೆಯರು ಕಣ್ಣೀರು ಹಾಕಿದ್ದಾರೆ. 

ಎರಡೂವರೆ ತಿಂಗಳಲ್ಲಿ ಮಳೆಗೆ 73 ಮಂದಿ ಬಲಿ, 22 ಸಾವಿರ ಮಂದಿ ಅತಂತ್ರ: ಆರ್ ಅಶೋಕ್

ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುದೂರು,ತಿಪ್ಪಸಂದ್ರ,ಮಾಡಬಾಳ್ ಹೋಬಳಿ ಗ್ರಾಮಗಳಲ್ಲಿ ನೆರೆ ಪರಿಸ್ಥಿತಿ ಉಂಟಾಗಿದೆ. ಸಾಕಷ್ಟು ಹಾನಿಗಳಾಗಿವೆ. ಜನ ಕಂಗಾಲಾಗಿದ್ದಾರೆ. ಮಳೆ ಹಾನಿ ಪ್ರದೇಶಗಳಿಗೆ ರಾಮನಗರ ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣ್ ಭೇಟಿ ನೀಡಿ ಮಳೆ ಹಾನಿಯನ್ನು ಪರಿಶೀಲಿಸಿದರು. 

Video Top Stories