Asianet Suvarna News Asianet Suvarna News

ಹೆಚ್ಚಾದ ಕೊರೋನಾ ಕಾಟ: ಮಿಜೋರಾಂಗೆ ಹೊರಟ ವಲಸೆ ಕಾರ್ಮಿಕರು

ಮಿಜೋರಾಂ ರಾಜ್ಯಕ್ಕೆ ಹೊರಟ ವಲಸೆ ಕಾರ್ಮಿಕರು|ಸಂಜೆ 7 ಗಂಟೆಗೆ ಹೊರಡಲಿರುವ ವಿಶೇಷ ಶ್ರಮಿಕ್‌ ರೈಲು|ಅರಮನೆ ಮೈದಾನದಲ್ಲಿ ಹೆಸರು ನೋಂದಣಿ ಮಾಡಲು ಆಗಮಿಸುತ್ತಿರುವ ಕಾರ್ಮಿಕರು| 

ಬೆಂಗಳೂರು(ಮೇ.25): ಲಾಕ್‌ಡೌನ್‌ನಿಂದ ತಮ್ಮ ರಾಜ್ಯಗಳಿಗೆ ತರಳುಲು ಆಗದೆ ನಗರದಲ್ಲೇ ಉಳಿದಿದ್ದ ಮಿಜೋರಾಂ ರಾಜ್ಯದ ವಲಸೆ ಕಾರ್ಮಿಕರು ತಮ್ಮ ರಾಜ್ಯದತ್ತ ಮುಖಮಾಡಿದ್ದಾರೆ. ಇಂದು ಸಂಜೆ 7 ಗಂಟೆಗೆ ವಿಶೇಷ ಶ್ರಮಿಕ್‌ ರೈಲು ಹೊರಡಲಿದೆ. ಹೀಗಾಗಿ ವಲಸೆ ಕಾರ್ಮಿಕರು ಅರಮನೆ ಮೈದಾನದಲ್ಲಿ ಹೆಸರು ನೋಂದಣಿ ಮಾಡಲು ಆಗಮಿಸುತ್ತಿದ್ದಾರೆ. 

ಅಜ್ಜಿ ಜೊತೆ ನಟಿ ಡ್ಯಾನ್ಸ್‌, Ramp Walk; ವಿಡಿಯೋ ಸಿಕ್ಕಾಪಟ್ಟೆ ವೈರಲ್!

ಪ್ಯಾಲೇಸ್‌ ಗ್ರೌಂಡ್‌ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಸರದಿ ಸಾಲಿನಲ್ಲಿ ನಿಂತು ಹೆಸರು ನೋಂದಣಿ ಮಾಡಿಸುತ್ತಿದ್ದಾರೆ. ಕಾರ್ಮಿಕರೆಲ್ಲರಿಗೂ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಜೊತೆಗೆ ಎಲ್ಲರೂ ಮಾಸ್ಕ್‌ ಧರಿಸುವುದು ಕಡ್ಡಾಯವಾಗಿದೆ.