Mekedatu Padayatre: ಸಂಕಲ್ಪ ಈಡೇರುವವರೆಗೆ ಗಡ್ಡ ತೆಗೆಯಲ್ಲ ಅಂದಿದ್ಯಾಕೆ ಡಿಕೆಶಿ.?
ನನ್ನನ್ನು ಮತ್ತೆ ಜೈಲಿಗೆ (Jail) ಸೇರಿಸಬೇಕೆಂದು ಮಸಲತ್ತು ನಡೆಯುತ್ತಿದೆ. ಮುಖ್ಯಮಂತ್ರಿ ಬೊಮ್ಮಾಯಿ (CM Bommai) ನಮ್ಮನ್ನು ಜೈಲಿನಲ್ಲಿ ನೋಡಲು ಬಯಸುತ್ತಿದ್ದಾರೆ. ನಮ್ಮನ್ನು ಜೈಲಿಗೆ ಕಳುಹಿಸಿ ನೀವು ಹಾಲು ಕುಡಿಯಿರಿ. ನಿಮ್ಮ ಹೊಟ್ಟೆತಣ್ಣಗಾಗಲಿದೆ ಎಂದು ಡಿಕೆಶಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರು (ಜ. 11): ನನ್ನನ್ನು ಮತ್ತೆ ಜೈಲಿಗೆ (Jail) ಸೇರಿಸಬೇಕೆಂದು ಮಸಲತ್ತು ನಡೆಯುತ್ತಿದೆ. ಮುಖ್ಯಮಂತ್ರಿ ಬೊಮ್ಮಾಯಿ (CM Bommai) ನಮ್ಮನ್ನು ಜೈಲಿನಲ್ಲಿ ನೋಡಲು ಬಯಸುತ್ತಿದ್ದಾರೆ. ನಮ್ಮನ್ನು ಜೈಲಿಗೆ ಕಳುಹಿಸಿ ನೀವು ಹಾಲು ಕುಡಿಯಿರಿ. ನಿಮ್ಮ ಹೊಟ್ಟೆತಣ್ಣಗಾಗಲಿದೆ ಎಂದು ಡಿಕೆಶಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮೇಕೆದಾಟು ಪಾದಯಾತ್ರೆ (Mekedatu Padayatre) ವೇಳೆ ಜನರನ್ನುದ್ದೇಶಿಸಿ ಮಾತನಾಡುತ್ತಾ, ಈ ಗಡ್ಡ ಬಿಟ್ಟಿದ್ದು ತಿಹಾರ್ ಜೈಲಿನಲ್ಲಿ( Tihar Jail) ಈ ಗಡ್ಡ ತೆಗೆಯಬೇಕಾದರೆ ನೀವೇ ಮುಕ್ತಿ ಕೊಡಿಸಬೇಕು ಎಂದು ತಮ್ಮ ಊರಿನ ಜನರಲ್ಲಿ ಮನವಿ ಮಾಡಿದರು. ನಮ್ಮ ಪಾದಯಾತ್ರೆ ತಡೆಯಲು ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಪಾದಯಾತ್ರೆ ನಿಲ್ಲಿಸಲು ಕರ್ಫ್ಯೂ ಜಾರಿ ತಂದಿದ್ದಾರೆ. ನಮ್ಮ ವಿರುದ್ಧ ಕೇಸು ಹಾಕುತ್ತಾರಂತೆ. ಕೇಸು ಹಾಕಿ ಜೈಲಿಗೆ ಕಳುಹಿಸಿ ನೋಡೋಣ. ನಾನು ಯಾವುದಕ್ಕೂ ಹೆದರುವವನಲ್ಲ ಎಂದು ಸವಾಲು ಹಾಕಿದರು.