Asianet Suvarna News Asianet Suvarna News

Mekedatu Padayatre: ಸಂಕಲ್ಪ ಈಡೇರುವವರೆಗೆ ಗಡ್ಡ ತೆಗೆಯಲ್ಲ ಅಂದಿದ್ಯಾಕೆ ಡಿಕೆಶಿ.?

ನನ್ನನ್ನು ಮತ್ತೆ ಜೈಲಿಗೆ (Jail) ಸೇರಿ​ಸ​ಬೇ​ಕೆಂದು ಮಸ​ಲತ್ತು ನಡೆ​ಯು​ತ್ತಿದೆ. ಮುಖ್ಯ​ಮಂತ್ರಿ ಬೊಮ್ಮಾಯಿ (CM Bommai) ನಮ್ಮನ್ನು ಜೈಲಿ​ನಲ್ಲಿ ನೋಡಲು ಬಯ​ಸು​ತ್ತಿ​ದ್ದಾರೆ. ನಮ್ಮನ್ನು ಜೈಲಿಗೆ ಕಳುಹಿಸಿ ನೀವು ಹಾಲು ಕುಡಿಯಿರಿ. ನಿಮ್ಮ ಹೊಟ್ಟೆತಣ್ಣಗಾಗಲಿದೆ ಎಂದು ಡಿಕೆಶಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 

ಬೆಂಗಳೂರು (ಜ. 11):  ನನ್ನನ್ನು ಮತ್ತೆ ಜೈಲಿಗೆ (Jail) ಸೇರಿ​ಸ​ಬೇ​ಕೆಂದು ಮಸ​ಲತ್ತು ನಡೆ​ಯು​ತ್ತಿದೆ. ಮುಖ್ಯ​ಮಂತ್ರಿ ಬೊಮ್ಮಾಯಿ (CM Bommai) ನಮ್ಮನ್ನು ಜೈಲಿ​ನಲ್ಲಿ ನೋಡಲು ಬಯ​ಸು​ತ್ತಿ​ದ್ದಾರೆ. ನಮ್ಮನ್ನು ಜೈಲಿಗೆ ಕಳುಹಿಸಿ ನೀವು ಹಾಲು ಕುಡಿಯಿರಿ. ನಿಮ್ಮ ಹೊಟ್ಟೆತಣ್ಣಗಾಗಲಿದೆ ಎಂದು ಡಿಕೆಶಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 

ಮೇಕೆದಾಟು ಪಾದಯಾತ್ರೆ (Mekedatu Padayatre) ವೇಳೆ ಜನರನ್ನುದ್ದೇಶಿಸಿ ಮಾತನಾಡುತ್ತಾ,  ಈ ಗಡ್ಡ ಬಿಟ್ಟಿದ್ದು ತಿಹಾರ್‌ ಜೈಲಿ​ನಲ್ಲಿ( Tihar Jail) ಈ ಗಡ್ಡ ತೆಗೆಯಬೇಕಾದರೆ ನೀವೇ ಮುಕ್ತಿ ಕೊಡಿಸಬೇಕು ಎಂದು ತಮ್ಮ ಊರಿನ ಜನರಲ್ಲಿ ಮನವಿ ಮಾಡಿದರು.  ನಮ್ಮ ಪಾದ​ಯಾತ್ರೆ ತಡೆ​ಯಲು ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡು​ತ್ತಿದೆ. ಪಾದ​ಯಾತ್ರೆ ನಿಲ್ಲಿ​ಸಲು ಕರ್ಫ್ಯೂ ಜಾರಿ ತಂದಿ​ದ್ದಾರೆ. ನಮ್ಮ ವಿರುದ್ಧ ಕೇಸು ಹಾಕು​ತ್ತಾ​ರಂತೆ. ಕೇಸು ಹಾಕಿ ಜೈಲಿಗೆ ಕಳು​ಹಿಸಿ ನೋಡೋಣ. ನಾನು ಯಾವು​ದಕ್ಕೂ ಹೆದ​ರು​ವ​ವ​ನಲ್ಲ  ಎಂದು ಸವಾಲು ಹಾಕಿ​ದರು.