Asianet Suvarna News Asianet Suvarna News

ಕಳೆದ 5 ವರ್ಷಗಳಿಂದ ನಮಗೂ ಆದಿತ್ಯನಿಗೂ ಸಂಬಂಧವಿಲ್ಲ: ಸಹೋದರ

ಮಂಗಳೂರು ಬಾಂಬ್ ಪ್ರಕರಣದ ಆರೋಪಿ ಆದಿತ್ಯ  ರಾವ್ ಬಗ್ಗೆ ಅವರ ಸಹೋದರ ಅಕ್ಷತ್ ರಾವ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 'ಆದಿತ್ಯನೊಂದಿಗೆ ನಮಗೆ ಕಳೆದ 5 ವರ್ಷಗಳಿಂದ ಯಾವುದೇ ಸಂಬಂಧ ಇಲ್ಲ' ಎಂದಿದ್ದಾರೆ. 

ಮಂಗಳೂರು (ಜ. 22): ಬಾಂಬ್ ಪ್ರಕರಣದ ಆರೋಪಿ ಆದಿತ್ಯ  ರಾವ್ ಬಗ್ಗೆ ಅವರ ಸಹೋದರ ಅಕ್ಷತ್ ರಾವ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

ಮಂಗಳೂರಲ್ಲಿ ಬಾಂಬ್‌ ಇಟ್ಟ ಆದಿತ್ಯ ಬೆಳೆದ ಮನೆ ಇದು..!

ಆದಿತ್ಯನೊಂದಿಗೆ ನಮಗೆ ಕಳೆದ 5 ವರ್ಷಗಳಿಂದ ಯಾವುದೇ ಸಂಬಂಧ ಇಲ್ಲ. ಕಳೆದ ಬಾರಿಯೇ ನಾವು ಆತನಿಗೆ ಬುದ್ಧಿ ಹೇಳಿದ್ದೆವು. ನಮ್ಮ ತಾಯಿ ತೀರಿ ಹೋದಾಗ ಆತನಿಗೆ ವಿಷಯ ತಿಳಿಸಿದ್ದೆವು. ಆಗ ಆದಿತ್ಯ ಜೈಲಿನಲ್ಲಿದ್ದ ಎಂದು ಅಕ್ಷತ್ ರಾವ್ ಮಾಧ್ಯಮದ ಮುಂದೆ ಹೇಳಿದ್ದಾರೆ. 

ಮಂಗಳೂರು ಬಾಂಬರ್ ಆದಿತ್ಯ ರಾವ್ 15 ವರ್ಷದಲ್ಲಿ...18 ಕೆಲಸ

ಅಕ್ಷತ್ ರಾವ್ ಬ್ಯಾಂಕ್ ಉದ್ಯೋಗಿ. ಈ ಸಂದರ್ಭದಲ್ಲಿ ಇವರ ಮೇಲಧಿಕಾರಿ ಅಕ್ಷತ್‌ ನೈತಿಕ ಬೆಂಬಲಕ್ಕೆ ನಿಂತಿರುವುದು ಶ್ಲಾಘನೀಯ. ಮಾಧ್ಯಮದೊಂದಿಗೆ ಅಕ್ಷತ್ ರಾವ್ ಮಾತುಗಳಿವು. 
 

Video Top Stories