Asianet Suvarna News Asianet Suvarna News

Covid 19: ಕೊರೋನಾ ಸ್ಫೋಟ, ಮತ್ತೆ ಲಾಕ್‌ಡೌನ್ ಆಗುತ್ತಾ.? ಸಿಎಂ ಪ್ರತಿಕ್ರಿಯೆ

ಮುಂಬೈ ಮಾದರಿಯಲ್ಲಿ ಬೆಂಗಳೂರಿನಲ್ಲಿ ಕಠಿಣ ನಿಯಮ ಜಾರಿ ಸಂಬಂಧ ಎರಡು ದಿನಗಳಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Bommai) ತಿಳಿಸಿದ್ದಾರೆ. ಜನರು ಸಹಕಾರ ಕೊಟ್ಟರೆ ಲಾಕ್‌ಡೌನ್‌ (Lockdown) ಆಗಲ್ಲ ಎಂದೂ ಹೇಳಿದ್ದಾರೆ.
 

ಬೆಂಗಳೂರು (ಜ. 03): ಮುಂಬೈ ಮಾದರಿಯಲ್ಲಿ ಬೆಂಗಳೂರಿನಲ್ಲಿ ಕಠಿಣ ನಿಯಮ ಜಾರಿ ಸಂಬಂಧ ಎರಡು ದಿನಗಳಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Bommai) ತಿಳಿಸಿದ್ದಾರೆ. ಜನರು ಸಹಕಾರ ಕೊಟ್ಟರೆ ಲಾಕ್‌ಡೌನ್‌ (Lockdown) ಆಗಲ್ಲ ಎಂದೂ ಹೇಳಿದ್ದಾರೆ.

Covid 19: ವಾರದ ಪಾಸಿಟಿವಿಟಿ ಶೇ. 5 ಕ್ಕಿಂತ ಹೆಚ್ಚಾದರೆ ಲಾಕ್‌ಡೌನ್ ಪಕ್ಕಾ.?

ನೈಟ್‌ ಕರ್ಫ್ಯೂ ವಿಸ್ತರಣೆ ಬಗ್ಗೆ ಸೋಮವಾರ ಅಥವಾ ಮಂಗಳವಾರ ತೀರ್ಮಾನ ಮಾಡಲಾಗುವುದು. ಕೋವಿಡ್‌ ಯಾವ ರೀತಿ ಹರಡುತ್ತಿದೆ ಎಂಬುದನ್ನು ಗಮನಿಸುತ್ತಿದ್ದೇವೆ. ವಿಶೇಷವಾಗಿ ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ವೈರಸ್‌ ಹರಡುತ್ತಿದೆ. ಇವೆಲ್ಲವನ್ನೂ ಗಮನಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ. ಜನ ಸಹಕಾರ ಕೊಟ್ಟರೆ ಲಾಕ್‌ಡೌನ್‌ ಆಗಲ್ಲ. ಜನ ಸಹಕಾರ ಕೊಡದೆ ಪ್ರಕರಣಗಳು ಹೆಚ್ಚಾಗಿ, ಲಾಕ್‌ಡೌನ್‌ ಅನಿವಾರ್ಯತೆ ತರಬಾರದು ಎಂದರು.