ಸಿಎಂ ಪೋಸ್ಟ್ ಮಾರ್ಕೆಟ್ನಲ್ಲಿ ಸಿಗೋದಲ್ಲ; ಭಿನ್ನಮತರಿಗೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಟಾಂಗ್
- 'ಪಕ್ಷದಲ್ಲಿ ನಾಯಕತ್ವದ ಬಗ್ಗೆ ಹಿರಿಯರು ಯಾರೂ ಮಾತನಾಡುತ್ತಿಲ್ಲ'
- 'ಕ್ಷೇತ್ರವನ್ನು ಉಳಿಸಿಕೊಳ್ಳಲು ಆಗದವರು ಮಾತನಾಡುತ್ತಿದ್ದಾರೆ'
- 'ಸಿಎಂ ಪೋಸ್ಟ್ ಮಾರ್ಕೆಟ್ನಲ್ಲಿ ಸಿಗೋದಲ್ಲ'
ಬೆಂಗಳೂರು (ಜೂ. 16): ಪಕ್ಷದಲ್ಲಿ ನಾಯಕತ್ವದ ಬಗ್ಗೆ ಹಿರಿಯರು ಯಾರೂ ಮಾತನಾಡುತ್ತಿಲ್ಲ. ಕ್ಷೇತ್ರವನ್ನು ಉಳಿಸಿಕೊಳ್ಳಲು ಆಗದವರು ಮಾತನಾಡುತ್ತಿದ್ದಾರೆ. ಬೇರೆ ಬೇರೆ ಪಕ್ಷಕ್ಕೆ ಹೋಗಿ ಬಂದು ಬಿಎಸ್ವೈ ನೆರವಿನಿಂದ ಎಂಎಲ್ಸಿ ಪದವಿ ಪಡೆದವರು ಈಗ ಸಿಎಂ ವಿರುದ್ಧ ಮಾತನಾಡುತ್ತಿದ್ದಾರೆ. ಪಕ್ಷಕ್ಕೆ ಅಂತವರ ಕೊಡುಗೆ ಏನು..? ಸಿಎಂ ಪೋಸ್ಟ್ ಮಾರ್ಕೆಟ್ನಲ್ಲಿ ಸಿಗೋದಲ್ಲ' ಎಂದು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಭಿನ್ನಮತರ ವಿರುದ್ಧ ಹರಿಹಾಯ್ದಿದ್ದಾರೆ.