Asianet Suvarna News Asianet Suvarna News

ಕುರುಬರ ಮತ್ತೊಂದು ಸುತ್ತಿನ ಹೋರಾಟ: ಸಿದ್ದರಾಮಯ್ಯ ಭಾಗಿಯಾಗ್ತಾರಾ?

ಎಸ್‌ಟಿ ಮೀಸಲಾತಿಗಾಗಿ ಈಗಾಗಲೇ ಕುರುಬ ಸಮುದಾಯ ಫೆ.7ರಂದು ಬೆಂಗಳೂರಿನಲ್ಲಿ ತಮ್ಮ ಶಕ್ತಿ ಪ್ರದರ್ಶನ ತೋರಿಸಿದೆ. ಇದೀಗ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಿದ್ಧವಾಗಿದೆ.
 

ಬೆಂಗಳೂರು, (ಫೆ.18): ಎಸ್‌ಟಿ ಮೀಸಲಾತಿಗಾಗಿ ಈಗಾಗಲೇ ಕುರುಬ ಸಮುದಾಯ ಫೆ.7ರಂದು ಬೆಂಗಳೂರಿನಲ್ಲಿ ತಮ್ಮ ಶಕ್ತಿ ಪ್ರದರ್ಶನ ತೋರಿಸಿದೆ. ಇದೀಗ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಿದ್ಧವಾಗಿದೆ.

ಹಿಂದ ಹೋರಾಟಕ್ಕೆ ವಿರೋಧ: ಸಿದ್ದರಾಮಯ್ಯ ನೇತೃತ್ವದಲ್ಲೇ ಕುರುಬರ ಸಮಾವೇಶ

ಹೌದು...ನಾಳೆ ಅಂದ್ರೆ (ಫೆ..19) ಬೆಂಗಳೂರಿನಲ್ಲಿ ಕುರುಬರ ಮತ್ತೊಂದು ಸುತ್ತಿನ ಹೋರಾಟ ತೀರ್ಮಾನಿಸಲಾಗಿದೆ. ಆದ್ರೆ, ಈ ಬಾರಿ ರಾಜ್ಯ ಕುರುಬರ ಸಂಘದಿಂದಲೇ ಹೋರಾಟಕ್ಕೆ ಕರೆ ನೀಡಿದ್ದು, ಕುರುಬರಿಗೆ ಎಸ್ ಟಿ ಮೀಸಲಾತಿ ಕೊಡಲು ತಕ್ಷಣವೇ ಕುಲಶಾಸ್ತ್ರೀಯ ಅಧ್ಯಯನ ಮಾಡಿಸಬೇಕೆಂದು ಆಗ್ರಹಿಸಲಿದೆ.