ಕೊನೆಗೂ ಲಸಿಕೆ ಬರಲು ಮುಹೂರ್ತ ಬಂತು, ಸಿಹಿಸುದ್ದಿ ಕೊಟ್ಟ ಆರೋಗ್ಯ ಸಚಿವರು!
ರಾಜ್ಯದಾದ್ಯಂತ ಕೊರೊನಾ ಲಸಿಕೆ ಡ್ರೈ ರನ್ ಶುರುವಾಗಿದೆ. ಯಾವಾಗಿಂದ ನಮಗೆ ಸಿಗುತ್ತದೆ ಎಂದು ಜನಸಾಮಾನ್ಯರು ಕಾಯುತ್ತಿರುವ ಘಳಿಗೆ ಕೊನೆಗೂ ಬಂದಿದೆ.
ಬೆಂಗಳೂರು (ಜ. 08): ರಾಜ್ಯದಾದ್ಯಂತ ಕೊರೊನಾ ಲಸಿಕೆ ಡ್ರೈ ರನ್ ಶುರುವಾಗಿದೆ. ಯಾವಾಗಿಂದ ನಮಗೆ ಸಿಗುತ್ತದೆ ಎಂದು ಜನಸಾಮಾನ್ಯರು ಕಾಯುತ್ತಿರುವ ಘಳಿಗೆ ಕೊನೆಗೂ ಬಂದಿದೆ. ಇದೇ ಸೋಮವಾರ 13 ಲಕ್ಷ 90 ಸಾವಿರ ಲಸಿಕೆ ರಾಜ್ಯಕ್ಕೆ ಬರಲಿದೆ ವ್ಯಾಕ್ಸಿನ್ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಸಿಹಿ ಸುದ್ದಿ ನೀಡಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ಹಾಗೂ ಆರೋಗ್ಯ ಸಚಿವ ಡಾ. ಹರ್ಷವರ್ಧನ್ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.