Asianet Suvarna News Asianet Suvarna News

ಸಾಲ ಮನ್ನಾ: ಸರ್ಕಾರದ ವಿರುದ್ಧ ಮತ್ತೆ ಬೀದಿಗಿಳಿದ ಅನ್ನದಾತ!

ಕಳೆದ ತಿಂಗಳಷ್ಟೇ ಬೀದಿಗಿಳಿದಿದ್ದ ರೈತರು ಮತ್ತೆ ಪ್ರತಿಭಟನೆ ಆರಂಭಿಸಿದ್ದಾರೆ. ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನೆ ನಡೆಯುತ್ತಿದೆ. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆಯುತ್ತಿರೋ ಈ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ರೈತರು ಆಗಮಿಸಿದ್ದು ನಗರದ ಮೌರ್ಯ ಸರ್ಕಲ್ ಬಳಿ ಅಹೋರಾತ್ರಿ ಧರಣಿಗೆ ಕುಳಿತಿದ್ದಾರೆ. 

ಬೆಂಗಳೂರು (ನ.07): ಕಳೆದ ತಿಂಗಳಷ್ಟೇ ಬೀದಿಗಿಳಿದಿದ್ದ ರೈತರು ಮತ್ತೆ ಪ್ರತಿಭಟನೆ ಆರಂಭಿಸಿದ್ದಾರೆ. ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನೆ ನಡೆಯುತ್ತಿದೆ. 

ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆಯುತ್ತಿರೋ ಈ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ರೈತರು ಆಗಮಿಸಿದ್ದು ನಗರದ ಮೌರ್ಯ ಸರ್ಕಲ್ ಬಳಿ ಅಹೋರಾತ್ರಿ ಧರಣಿಗೆ ಕುಳಿತಿದ್ದಾರೆ. 

ಸಾಲ ಮನ್ನಾ, ಬ್ಯಾಂಕ್ ಕಿರುಕುಳದಿಂದ ಮುಕ್ತಿ, ನಿರಾಶ್ರಿತರಿಗೆ ಮನೆ,  ಮುಳುಗಡೆ ಆದ ಪ್ರದೇಶಗಳ ಸ್ಥಳಾಂತರ ಇವು ರೈತರ ಪ್ರಮುಖ ಬೇಡಿಕೆಗಳು.