Asianet Suvarna News Asianet Suvarna News

‘ನೋಟ್ ಬ್ಯಾನ್‌ ಉದ್ದೇಶ ಈಡೇರಿಲ್ಲ, ಯಾರಿಗೂ ಲಾಭವಾಗಿಲ್ಲ’

ಕೇಂದ್ರದ ನೋಟ್ ಬ್ಯಾನ್‌ ಕ್ರಮಕ್ಕೆ ಮೂರು ವರ್ಷಗಳಾಗಿವೆ. ಆದರೆ ಪ್ರಧಾನಿ ಮೋದಿ ಹೇಳಿದಂತೆ ಆ ಕ್ರಮದ ಯಾವುದೇ ಉದ್ದೇಶ ಈಡೇರಿಲ್ಲ, ಯಾರಿಗೂ ಲಾಭವಾಗಿಲ್ಲ, ಕೇಂದ್ರ ಸರ್ಕಾರದ ಜನವಿರೋಧಿ ಆರ್ಥಿಕ ನೀತಿಗಳಿಂದ ಜನಸಾಮಾನ್ಯರು ನರಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.  

ಬೆಂಗಳೂರು (ನ.11): ಕೇಂದ್ರದ ನೋಟ್ ಬ್ಯಾನ್‌ ಕ್ರಮಕ್ಕೆ ಮೂರು ವರ್ಷಗಳಾಗಿವೆ. ಆದರೆ ಪ್ರಧಾನಿ ಮೋದಿ ಹೇಳಿದಂತೆ ಆ ಕ್ರಮದ ಯಾವುದೇ ಉದ್ದೇಶ ಈಡೇರಿಲ್ಲ, ಯಾರಿಗೂ ಲಾಭವಾಗಿಲ್ಲ, ಎಂದು ಸಿದ್ದರಾಮಯ್ಯ ಹೇಳಿದರು.  

ಕೇಂದ್ರ ಸರ್ಕಾರದ ಜನವಿರೋಧಿ ಆರ್ಥಿಕ ನೀತಿಗಳ ವಿರುದ್ಧ ಕಾಂಗ್ರೆಸ್ ಪಕ್ಷವು ನಗರದ ಟೌನ್ ಹಾಲ್ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಹಿರಿಯ ನಾಯಕರು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕಪ್ಪುಹಣದ ವಿರುದ್ಧ ಹೋರಾಟದ ಭಾಗವಾಗಿ 2016 ನವೆಂಬರ್ 8ಕ್ಕೆ ಕೇಂದ್ರ ಸರ್ಕಾರವು ರೂ.500 ಮತ್ತು ರೂ.1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿತ್ತು. 

 

Video Top Stories