Asianet Suvarna News Asianet Suvarna News

ಬಿಎಸ್‌ವೈ ಸರ್ಕಾರಕ್ಕೆ ವರ್ಷ: ಕನ್ನಡ ಪ್ರಭ ವಿಶೇಷ ಸಂಚಿಕೆ ಬಿಡುಗಡೆ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕನ್ನಡಪ್ರಭ 'ಸರ್ಕಾರದ ಸಾಧನೆ ಸವಾಲು' ಎಂಬಎರಡು ವಿಶೇಷ ಸಂಚಿಕೆಯನ್ನ ಹೊರತರುತ್ತಿದೆ.

ಬೆಂಗಳೂರು (ಜು. 26): ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕನ್ನಡಪ್ರಭ 'ಸರ್ಕಾರದ ಸಾಧನೆ ಸವಾಲು' ಎಂಬಎರಡು ವಿಶೇಷ ಸಂಚಿಕೆಯನ್ನ ಹೊರತರುತ್ತಿದೆ.

 ಈ ವಿಶೇಷ ಸಂಚಿಕೆಯನ್ನ ಮುಖ್ಯಮಂತ್ರಿ ಬಿಎಸ್  ಯಡಿಯೂರಪ್ಪನವರು ಬಿಡುಗಡೆ ಮಾಡಿದರು. ವಿಶೇಷ ಸಂಚಿಕೆಯನ್ನ ಬಿಡುಗಡೆ ಮಾಡಿ ಮಾತನಾಡಿದ ಮುಖ್ಯಮಂತ್ರಿಗಳು ಕನ್ನಡ ಪ್ರಭ ಹೊರತರುತ್ತಿರುವ ವಿಶೇಷ ಪುರಾವಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಮ್ಮ ಸರ್ಕಾರದ ಒಂದು ವರ್ಷದ ಸಾಧನೆಯ ಬಗ್ಗೆ ವಿಶೇಷ ಬರಹವನ್ನ ಈ ಸಂಚಿಕೆಯಲ್ಲಿ ಬರೆದಿದ್ದಾರೆ ಎಂದು ಕನ್ನಡ ಪ್ರಭ ಬಳಗಕ್ಕೆ ಅಭಿನಂದನೆ ಸಲ್ಲಿಸಿದ್ರು.

ಈ ಸಂದರ್ಭದಲ್ಲಿ ಕನ್ನಡಪ್ರಭ - ಸುವರ್ಣ ನ್ಯೂಸ್ ನ ಪ್ರಧಾನ ಸಂಪಾದಕರಾದ ರವಿ ಹೆಗಡೆ, ಏಷಿಯಾ ನೆಟ್ ಗ್ರೂಪ್ ನ  ಬಿಸಿನೆಸ್ ಹೆಡ್ ಎನ್ ಕೆ ಅಪ್ಪಚ್ಚು..ಕನ್ನಡ ಪ್ರಭ ಸೇಲ್ಸ್ ಡಿಜಿಎಮ್ ರಾಘವೇಂದ್ರ ಉಪಸ್ಥಿತರಿದ್ದರು... ಒಂದು ವಿಶೇಷ ಸಂಚಿಕೆ ಭಾನುವಾರದ ಕನ್ನಡ ಪ್ರಭದ ಜೊತೆ ಉಚಿತವಾಗಿ ಸಿಗಲಿದೆ ಮತ್ತೊಂದು‌ ಸಂಚಿಕೆ ಸೋಮವಾರ ಸಿಗಲಿದೆ.


 

Video Top Stories