Asianet Suvarna News Asianet Suvarna News

ಸುಮಲತಾ ಭ್ರಷ್ಟಾಚಾರದ ದಾಖಲೆಯಿದೆ, ಬಿಡುಗಡೆ ಮಾಡ್ತೀನಿ: ರವೀಂದ್ರ ಶ್ರೀಕಂಠಯ್ಯ ಬಾಂಬ್

- ಅಂಬರೀಷ್‌ ಕಾಲದಲ್ಲೇ ಅಕ್ರಮ ಗಣಿಗಾರಿಕೆ: ರವೀಂದ್ರ ಶ್ರೀಕಂಠಯ್ಯ

- ಅಂಬಿ ಆಪ್ತ ಲಿಂಗರಾಜು ಹೆಸರಲ್ಲಿ ಗಣಿಗಾರಿಕೆ: ಜೆಡಿಎಸ್‌ ಶಾಸಕ ಆರೋಪ

- ಸುಮಲತಾ ಭ್ರಷ್ಟಾಚಾರ ಕುರಿತು ಸೂಕ್ತ ಸಮಯದಲ್ಲಿ ದಾಖಲೆ ಬಿಡುಗಡೆ

ಬೆಂಗಳೂರು (ಜು. 09): ಕೆಆರ್‌ಸ್‌ ಅಣೆಕಟ್ಟು ಮತ್ತು ಅಕ್ರಮ ಗಣಿಗಾರಿಕೆ ವಿಚಾರಕ್ಕೆ ಸಂಬಂಧಿಸಿ ಸಂಸದೆ ಸುಮಲತಾ ಮತ್ತು ಜೆಡಿಎಸ್‌ ಶಾಸಕರ ನಡುವಿನ ವಾಕ್ಸಮರ ಇದೀಗ ತಾರಕಕ್ಕೇರಿದೆ. ಕೆಆರ್‌ಎಸ್‌ನಿಂದ ಶುರುವಾದ ಡಿಶುಂ ಡಿಶುಂ ಈಗ ಗಣಿಗಾರಿಕೆಯವರೆಗೆ ಬಂದು ನಿಂತಿದೆ.

ಅಂಬರೀಶ್ ಹೆಸರು ಬಳಕೆ ಮಾಡಿದರೆ ಸುಟ್ಟು ಭಸ್ಮ ಆಗ್ತೀರಿ; ಜೆಡಿಎಸ್ ನಾಯಕರಿಗೆ ಸುಮಲತಾ ವಾರ್ನಿಂಗ್!

ಈ ವಿಚಾರವಾಗಿ ಸುಮಲತಾ ಅವರ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಅಂಬರೀಷ್‌ ಸಂಸದರಾಗಿದ್ದ ಕಾಲದಲ್ಲೇ ಅವರ ಆಪ್ತರ ಹೆಸರಿನಲ್ಲಿ ಗಣಿಗಾರಿಕೆ ನಡೆಯುತ್ತಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದೇ ವೇಳೆ, ಸಂಸದೆ ಸುಮಲತಾ ಅವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಬಗ್ಗೆ ತನ್ನಲ್ಲಿ ದಾಖಲೆಗಳಿದ್ದು, ಸೂಕ್ತ ಸಮಯದಲ್ಲಿ ಅವುಗಳನ್ನು ಬಿಡುಗಡೆ ಮಾಡುವುದಾಗಿ ಹೊಸ ಬಾಂಬ್‌ ಕೂಡ ಸಿಡಿಸಿದ್ದಾರೆ. ಕೆಆರ್‌ಎಸ್ ವಾರ್ ಬಗ್ಗೆ ಇನ್‌ಸೈಡ್ ಸ್ಟೋರಿ ಇಲ್ಲಿದೆ.