Asianet Suvarna News Asianet Suvarna News

Davanagere: ಬರ್ತಡೇ ಸಂಭ್ರಮ, ಬಿಜೆಪಿ ಶಾಸಕ ರಾಮಚಂದ್ರರಿಂದ ಕೊರೊನಾ ರೂಲ್ಸ್ ಬ್ರೇಕ್

ಜನರಿಗೊಂದು ನ್ಯಾಯ, ಜನಪ್ರತಿನಿಧಿಗಳಿಗೊಂದು ನ್ಯಾಯ ಎನ್ನುವುದಕ್ಕೆ ಉದಾಹರಣೆಯಾಗಿ ಬಿಜೆಪಿಯ ಶಾಸಕರಿಂದಲೇ ಸರ್ಕಾರದ ಕೊರೊನಾ ರೂಲ್ಸ್ (Corona Rules) ಬ್ರೇಕ್ ಆಗಿದೆ. ಜಗಳೂರು ಶಾಸಕ (Jagaluru) ರಾಮಚಂದ್ರ  (Ramachandra) ಬರ್ತಡೇ ಸಂಭ್ರಮ ಜೋರಾಗಿದೆ. 

ದಾವಣಗೆರೆ (ಜ. 16): ಜನರಿಗೊಂದು ನ್ಯಾಯ, ಜನಪ್ರತಿನಿಧಿಗಳಿಗೊಂದು ನ್ಯಾಯ ಎನ್ನುವುದಕ್ಕೆ ಉದಾಹರಣೆಯಾಗಿ ಬಿಜೆಪಿಯ ಶಾಸಕರಿಂದಲೇ ಸರ್ಕಾರದ ಕೊರೊನಾ ರೂಲ್ಸ್ (Corona Rules) ಬ್ರೇಕ್ ಆಗಿದೆ. ಜಗಳೂರು ಶಾಸಕ (Jagaluru) ರಾಮಚಂದ್ರ  (Ramachandra) ಬರ್ತಡೇ ಸಂಭ್ರಮ ಜೋರಾಗಿದೆ. ಶಾಮಿಯಾನ ಹಾಕಿ ನೂರಾರು ಜನ ಸೇರಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದು ಅಚ್ಚರಿ ಮೂಡಿಸಿದೆ. 

ಇತ್ತ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.  ಹೊನ್ನಾಳಿಯ ಬಳ್ಳೇಶ್ವರ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಉದ್ಘಾಟನೆ ಮಾಡಿ ಭಾಷಣ ಮಾಡಿದರು. ಈ ಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರು ಮಾಸ್ಕ್ ಇಲ್ಲದೇ ಸಾಮಾಜಿಕ ಅಂತರವಿಲ್ಲದೇ ಭಾಗಿಯಾದರು. ಜನರಿಗೆ ಒಂದು ನ್ಯಾಯ ಜನಪ್ರತಿನಿಧಿಗಳಿಗೆ ಒಂದು ನ್ಯಾಯವೇ..? 

Video Top Stories