ಅಫ್ಘನಿಸ್ತಾನದಲ್ಲಿರುವ ಭಾರತೀಯರ ರಕ್ಷಣೆಗೆ ಸರ್ಕಾರ ಬದ್ಧ: ಪ್ರಹ್ಲಾದ್ ಜೋಶಿ
ತಾಲಿಬಾನಿಗಳು ಇಡೀ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ಬೆನ್ನಲ್ಲೇ ರಾಜಧಾನಿ ಕಾಬೂಲ್ನಲ್ಲಿ ಭಾರೀ ಅರಾಜಕತೆ ಉಂಟಾಗಿದೆ. ಕಂಡು ಕೇಳರಿಯದ ನಾಗರೀಕ ವಿಪತ್ತೊಂದಕ್ಕೆ ಸಾಕ್ಷಿಯಾಗುತ್ತಿದೆ.
ಬೆಂಗಳೂರು (ಆ. 17): ತಾಲಿಬಾನಿಗಳು ಇಡೀ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ಬೆನ್ನಲ್ಲೇ ರಾಜಧಾನಿ ಕಾಬೂಲ್ನಲ್ಲಿ ಭಾರೀ ಅರಾಜಕತೆ ಉಂಟಾಗಿದೆ. ಕಂಡು ಕೇಳರಿಯದ ನಾಗರೀಕ ವಿಪತ್ತೊಂದಕ್ಕೆ ಸಾಕ್ಷಿಯಾಗುತ್ತಿದೆ.
ತಾಲಿಬಾನ್ ಕೈಯಲ್ಲಿ ಅಫ್ಘಾನಿಸ್ತಾನ, ಅಮೆರಿಕಾ ನಿರ್ಧಾರ ನಿರೀಕ್ಷಿತ: ಅನಂತ್ ನಾಗ್
ಅಫ್ಘನ್ನಿನಲ್ಲಿರುವ ಭಾರತೀಯರ ರಕ್ಷಣೆಗೆ ಭಾರತ ಸರ್ಕಾರ ಬದ್ಧ. ಭಾರತೀಯರ ಜೊತೆ ನಿರಂತರ ಸಂಪರ್ಕದಲ್ಲಿದೆ. ಅಲ್ಲಿನ ಜನರ ಜೀವ ಕಾಪಾಡುವುದು ಅಗತ್ಯ. ಅಮೆರಿಕಾ ಸರ್ಕಾರ ಅಲ್ಲಿನ ಜನರ ರಕ್ಷಣೆಗೆ ಕಾಳಜಿ ತೋರಬೇಕು. ಎಲ್ಲಾ ಸಮಸ್ಯೆಗಳನ್ನು ಎದುರಿಸಲು ನಾವು ಸಮರ್ಥರದ್ಧೇವೆ' ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.