ಸಂಕಷ್ಟದಲ್ಲಿ ಚಂದನ್ ಶೆಟ್ಟಿ; ಠಾಣೆ ಮೆಟ್ಟಿಲೇರಿದ 'ಕೋಲು ಮಂಡೆ' ವಿವಾದ
ರ್ಯಾಪರ್ ಚಂದನ್ ಶೆಟ್ಟಿಗೆ ಸಂಕಷ್ಟ ಎದುರಾಗಿದೆ. ಮಾದೇಶ್ವರ ಭಕ್ತರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಇವರ 'ಕೋಲು ಮಂಡೆ' ವಿಡಿಯೋ ಸಾಂಗ್ಗೆ ಮಾದೇಶ್ವರ ಭಕ್ತರಿಂದ ವಿರೋಧ ವ್ಯಕ್ತವಾಗಿದೆ. ಇದಕ್ಕೆ ಚಂದನ್ ಕ್ಷಮೆಯಾಚಿಸಿದ್ದರು. ಆದರೆ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಚಂದನ್ ವಿರುದ್ಧ ದೂರು ದಾಖಲಿಸಲಾಗಿದೆ. ಕಾನೂನು ತಜ್ಞರ ಅಭಿಪ್ರಾಯ ಪಡೆಯಲಿದ್ದಾರೆ ಪೊಲೀಸರು.
ಬೆಂಗಳೂರು (ಆ. 26): ರ್ಯಾಪರ್ ಚಂದನ್ ಶೆಟ್ಟಿಗೆ ಸಂಕಷ್ಟ ಎದುರಾಗಿದೆ. ಮಾದೇಶ್ವರ ಭಕ್ತರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಇವರ 'ಕೋಲು ಮಂಡೆ' ವಿಡಿಯೋ ಸಾಂಗ್ಗೆ ಮಾದೇಶ್ವರ ಭಕ್ತರಿಂದ ವಿರೋಧ ವ್ಯಕ್ತವಾಗಿದೆ. ಇದಕ್ಕೆ ಚಂದನ್ ಕ್ಷಮೆಯಾಚಿಸಿದ್ದರು. ಆದರೆ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಚಂದನ್ ವಿರುದ್ಧ ದೂರು ದಾಖಲಿಸಲಾಗಿದೆ. ಕಾನೂನು ತಜ್ಞರ ಅಭಿಪ್ರಾಯ ಪಡೆಯಲಿದ್ದಾರೆ ಪೊಲೀಸರು.
'ಇದು ನಮಗೆ ಗೊತ್ತಿಲ್ಲದೇ ಆಗಿರುವ ತಪ್ಪು. ಯಾರಿಗೂ ಅವಮಾನ ಮಾಡುವ ಉದ್ದೇಶ ನಮಗ್ಯಾರಿಗೂ ಇಲ್ಲ. ಜಾನಪದ ಕತೆಯನ್ನು ಚಿತ್ರಣ ಮಾಡುವಲ್ಲಿ ತಪ್ಪಾಗಿದೆ. ಅದಕ್ಕೆ ಕ್ಷಮೆಯಾಚಿಸುತ್ತೇನೆ' ಎಂದು ಸುವರ್ಣ ನ್ಯೂಸ್ ಮೂಲಕ ಚಂದನ್ ಶೆಟ್ಟಿ ಕ್ಷಮೆಯಾಚಿಸಿದ್ಧಾರೆ.