Asianet Suvarna News Asianet Suvarna News

ಜಮೀರ್-ಪುತ್ರನ ವಿರುದ್ಧ ಅಭಿಯಾನ: ಅಪ್ಪ-ಮಗನ ವಿರುದ್ಧ ಮುಗಿಬಿದ್ದ ಹಿಂದೂಪರ ಸಂಘಟನೆಗಳು

ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ಹಾಗೂ ಅವರ ಪುತ್ರ ಜಾಯಿದ್ ಖಾನ್ ವಿರುದ್ಧ ಹಿಂದೂಪರ ಸಂಘಟನೆಗಳು ಮುಗಿಬಿದ್ದಿವೆ.

ಬೆಂಗಳೂರು, (ಸೆಪ್ಟೆಂಬರ್.09): ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ವಿರೋಧಿಸಿದ್ದಕ್ಕೆ ಹಿಂದುಪರ ಸಂಘಟನೆಗಳು  ಅಹ್ಮದ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿವೆ. ಇದೀಗ ಇದರ ಪರಿಣಾಮ ಜಮೀರ್‌ ಪುತ್ರನ ಸಿನಿಮಾದ ಮೇಲೂ ಬಿದ್ದಿದೆ.

ಚಾಮರಾಜಪೇಟೆಯಲ್ಲಿ ಗಣೇಶ ಪ್ರತಿಷ್ಠಾಪನೆ: ಹಿಂದೂ ಹಬ್ಬ ಮಾಡದ ಜಮೀರ್ ಈ ಬಾರಿ ಗಣೇಶೋತ್ಸವ ಆಚರಿಸ್ತಿರೋದ್ಯಾಕೆ?

ಹೌದು...ಸಾಕಷ್ಟು ಕನಸುಗಳನ್ನು ಹೊತ್ತುಕೊಂಡು ನಟ ಜಾಯಿದ್ ಖಾನ್​  ಅವರು ಚಿತ್ರರಂಗ ಪ್ರವೇಶಿಸಿದ್ದಾರೆ. ಅವರ ಚೊಚ್ಚಲ ಸಿನಿಮಾ ‘ಬನಾರಸ್​’ (Banaras Movie) ಬಿಡುಗಡೆಗೆ ಸಜ್ಜಾಗಿದೆ. ಆದ್ರೆ, ಹಿಂದೂ ಸಂಘಟನೆಗಳು ಬಹಿಷ್ಕಾರ ಹಾಕುವಂತೆ ಅಭಿಯಾನ ಶುರುವಾಡಿಕೊಂಡಿವೆ. 

Video Top Stories