ವಾಹನ ಸವಾರರೇ ಗಮನಿಸಿ; ಮೈಸೂರು ರಸ್ತೆ ಕಡೆ ಹೋಗದಿರುವುದೇ ಬೆಸ್ಟ್!
ಬೆಂಗಳೂರಿನಲ್ಲಿ ಇಂದು ಬೆಳಿಗ್ಗೆಯಿಂದ ಧಾರಾಕಾರ ಮಳೆಯಾಗುತ್ತಿದೆ. ಮೈಸೂರು ರಸ್ತೆಯಲ್ಲಿ ಭಾರೀ ವಾಹನ ದಟ್ಟಣೆ ಉಂಟಾಗಿದೆ. ಪ್ರವಾಸಿಗರ ದಂಡು ದಸರಾ ವೀಕ್ಷಣೆಗೆ ಮೈಸೂರು ಕಡೆ ಹೊರಟಿದ್ದಾರೆ. ತುರ್ತು ಕೆಲಸ ಇದ್ದವರು ಮೈಸೂರು ರಸ್ತೆಯ ಕಡೆ ಹೋಗಬೇಡಿ.
ಬೆಂಗಳೂರು (ಅ. 19): ಬೆಂಗಳೂರಿನಲ್ಲಿ ಇಂದು ಬೆಳಿಗ್ಗೆಯಿಂದ ಧಾರಾಕಾರ ಮಳೆಯಾಗುತ್ತಿದೆ. ಮೈಸೂರು ರಸ್ತೆಯಲ್ಲಿ ಭಾರೀ ವಾಹನ ದಟ್ಟಣೆ ಉಂಟಾಗಿದೆ. ಪ್ರವಾಸಿಗರ ದಂಡು ದಸರಾ ವೀಕ್ಷಣೆಗೆ ಮೈಸೂರು ಕಡೆ ಹೊರಟಿದ್ದಾರೆ. ತುರ್ತು ಕೆಲಸ ಇದ್ದವರು ಮೈಸೂರು ರಸ್ತೆಯ ಕಡೆ ಹೋಗಬೇಡಿ. ಸುಮಾರು 10 ಕಿಮೀವರೆಗೆ ಟ್ರಾಫಿಕ್ ಜಾಮ್ ಉಂಟಾಗಿದೆ. ಟ್ರಾಫಿಕ್ ಕ್ಲಿಯರ್ ಆಗೋಕೆ ಗಂಟೆಗಟ್ಟಲೆ ಕಾಯಬೇಕಾಗಿದೆ. ಹೀಗಾಗಿ ಇಂದು ಮೈಸೂರು ರಸ್ತೆ ಕಡೆ ಹೋಗದಿರುವುದು ಉತ್ತಮ..!