ಡಿಕೆಶಿಗೆ ವಿರುದ್ಧ ತಿರುಗಿ ಬಿದ್ದ ಎಚ್ಡಿಕೆ; ಬಲಗೈ ಬಂಟನಂತಿದ್ದ ಡಿಕೆಶಿ ಬಗಲ ಮುಳ್ಳಾದ್ರಾ?
ಕನಕಪುರ ಬಂಡೆ ಡಿಕೆ ಶಿವಕುಮಾರ್ ವಿರುದ್ಧ ಎಚ್ಡಿಕೆ ತಿರುಗಿ ಬಿದ್ದಿದ್ದಾರೆ. ಅಂದು ಎಚ್ಡಿಕೆ ಪಾಲಿಗೆ ಬಲಗೈ ಬಂಟನಾಗಿದ್ದ ಡಿಕೆಶಿ ಇಂದು ಸೆರಗಲ್ಲಿ ಕಟ್ಟಿಕೊಂಡ ಕೆಂಡವಾಗಿದ್ದಾರೆ. ಎರಡು ವರ್ಷಗಳ ಹಿಂದೆ ಎಚ್ಡಿಕೆ ಮುಖ್ಯಮಂತ್ರಿಯಾಗಲು ಡಿಕೆಶಿಯೇ ಕಾರಣ. ಆಪರೇಶನ್ ಭೀತಿಯಲ್ಲಿದ್ದ ಶಾಸಕರನ್ನು ರಕ್ಷಿಸಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ರಚಿಸುವಲ್ಲಿ ಡಿಕೆಶಿ ವಹಿಸಿದ ಪಾತ್ರ ಮಹತ್ತರವಾದದ್ದು. ಆಗ ಇಂದಿನ ಸಿಎಂ ಯಡಿಯೂರಪ್ಪ ಡಿಕೆಶಿಯನ್ನು 'ಖಳನಾಯಕ' ಎಂದು ಹೇಳಿದ್ದಾರೆ.
ಬೆಂಗಳೂರು (ಜೂ. 03): ಕನಕಪುರ ಬಂಡೆ ಡಿಕೆ ಶಿವಕುಮಾರ್ ವಿರುದ್ಧ ಎಚ್ಡಿಕೆ ತಿರುಗಿ ಬಿದ್ದಿದ್ದಾರೆ. ಅಂದು ಎಚ್ಡಿಕೆ ಪಾಲಿಗೆ ಬಲಗೈ ಬಂಟನಾಗಿದ್ದ ಡಿಕೆಶಿ ಇಂದು ಸೆರಗಲ್ಲಿ ಕಟ್ಟಿಕೊಂಡ ಕೆಂಡವಾಗಿದ್ದಾರೆ. ಎರಡು ವರ್ಷಗಳ ಹಿಂದೆ ಎಚ್ಡಿಕೆ ಮುಖ್ಯಮಂತ್ರಿಯಾಗಲು ಡಿಕೆಶಿಯೇ ಕಾರಣ. ಆಪರೇಶನ್ ಭೀತಿಯಲ್ಲಿದ್ದ ಶಾಸಕರನ್ನು ರಕ್ಷಿಸಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ರಚಿಸುವಲ್ಲಿ ಡಿಕೆಶಿ ವಹಿಸಿದ ಪಾತ್ರ ಮಹತ್ತರವಾದದ್ದು. ಆಗ ಇಂದಿನ ಸಿಎಂ ಯಡಿಯೂರಪ್ಪ ಡಿಕೆಶಿಯನ್ನು 'ಖಳನಾಯಕ' ಎಂದು ಹೇಳಿದ್ದಾರೆ.
ರಾಜ್ಯಸಭೆಗೆ ಹೋಗೊಲ್ಲ, ಚನ್ನಪಟ್ಟಣ ಬಿಡೊಲ್ಲ: ಎಚ್ಡಿಕೆ
ಡಿಕೆಶಿ- ಎಚ್ಡಿಕೆ ಸ್ನೇಹ ಕೈ ನಾಯಕರ ಕೆಂಂಗಣ್ಣಿಗೆ ಗುರಿಯಾಗಿದ್ದೂ ಇದೆ. ಕುಮಾರಸ್ವಾಮಿಯವರು ಡಿಕೆಶಿ ಋಣದಲ್ಲಿದ್ದಾರೆ . ತೀರಿಸಬೇಕು ಎಂಬ ಮಾತು ಕೇಳಿ ಬಂದಿದ್ದು, ಅದಕ್ಕೆ ಕುಮಾರಣ್ಣ ಟಾಂಗ್ ಕೊಟ್ಟಿದ್ದಾರೆ. 'ನಾನು ಯಾರ ಋಣದಲ್ಲಿಯೂ ಇಲ್ಲ. ಇವೆಲ್ಲ ಲೂಸ್ ಟಾಕ್' ಎಂದು ಹೇಳಿದ್ದಾರೆ.