Asianet Suvarna News Asianet Suvarna News

ಹಬ್ಬಕ್ಕೆ ಹೆಚ್ಚಾಯ್ತು ಖಾಸಗಿ ಬಸ್‌ಗಳ ದರ, ಊರಿಗೆ ಹೊರಡುವವರು ಇಂದೇ ಹೊರಡಿ.!

 ಗೌರಿ- ಗಣೇಶ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಖಾಸಗಿ ಬಸ್‌ಗಳ ಟಿಕೆಟ್ ಬೆಲೆ ಗಗನಕ್ಕೇರಿದೆ. ಬೆಂಗಳೂರಿನಿಂದ ಮಂಗಳೂರಿಗೆ ಇಂದು 800 ರೂ ಆದರೆ ನಾಳೆಯಿಂದ 1100 ರೂ ಆಗಲಿದೆ. 

ಬೆಂಗಳೂರು (ಸೆ. 07): ಗೌರಿ- ಗಣೇಶ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಖಾಸಗಿ ಬಸ್‌ಗಳ ಟಿಕೆಟ್ ಬೆಲೆ ಗಗನಕ್ಕೇರಿದೆ. ಬೆಂಗಳೂರಿನಿಂದ ಮಂಗಳೂರಿಗೆ ಇಂದು 800 ರೂ ಆದರೆ ನಾಳೆಯಿಂದ 1100 ರೂ, ಬೆಂಗಳೂರಿನಿಂದ ಹುಬ್ಬಳ್ಳಿಗೆ ಇಂದು 750 ರೂ, ನಾಳೆಯಿಂದ 1200 ರೂ, ಬೆಂಗಳೂರಿನಿಂದ ಶಿವಮೊಗ್ಗ ಇಂದು 599 ರೂ, ನಾಳೆಯಿಂದ 1099 ರೂಗೆ ಏರಿಕೆಯಾಗಲಿದೆ. 

ಮಂಡ್ಯ : ಸಚಿವ ನಾರಾಯಣ ಗೌಡರ ಭಾಷಣದ ವೇಳೆ ಕಣ್ಣೀರಿಟ್ಟ ಪತ್ನಿ, ಪುತ್ರಿ

ಹಬ್ಬದ ನೆಪದಲ್ಲಿ ಖಾಸಗಿ ಬಸ್‌ಗಳು ಪ್ರಯಾಣಿಕರ ಮೇಲೆ ಬರೆ ಎಳೆಯಲಿದೆ. ಏಷ್ಯಾನೆಟ್ ವರದಿ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ಎಚ್ಚೆತ್ತುಕೊಂಡಿದೆ. ಹೆಚ್ಚುವರಿ 1 ಸಾವಿರ ಬಸ್‌ಗಳ ವ್ಯವಸ್ಥೆ ಮಾಡಿದೆ. 

 

Video Top Stories