Asianet Suvarna News Asianet Suvarna News

Free Hindu Temple: ಮುಸ್ಲಿಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಡಿಕೆಶಿ ಮತಾಂತರ ಆಗ್ಲಿ!

ದೇವಸ್ಥಾನಗಳಿಗೆ ಸ್ವಾತಂತ್ರ್ಯ ಕೊಟ್ರೆ ಕಾಂಗ್ರೆಸ್ ಗೆ ಯಾಕೆ ಉರಿ
ಬೇಕಾದಲ್ಲಿ ಡಿಕೆಶಿ, ಕ್ರಿಶ್ವಿಯನ್ ಅಥವಾ ಮುಸ್ಲಿಂ ಧರ್ಮಕ್ಕೆ ಮತಾಂತ ಆಗಲಿ
ಕೆಪಿಸಿ ಅಧ್ಯಕ್ಷರ ಮಾತಿಗೆ ಸಚಿವ ಕೆಎಸ್ ಈಶ್ವರಪ್ಪ ತಿರುಗೇಟು

ಬೆಂಗಳೂರು (ಜ.1): ದೇವಾಲಯಗಳನ್ನು (Free Temple ) ಸ್ವತಂತ್ರಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್  (Minister of Rural Development and Panchayat Raj of Karnataka) ಸಚಿವ ಕೆಎಸ್ ಈಶ್ವರಪ್ಪ (Ks Eshwarappa) ತಿರುಗೇಟು ನೀಡಿದ್ದಾರೆ. ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರ ಮಾತುಗಳಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, "ಇಲ್ಲಿಯವರೆಗೆ ಚರ್ಚ್ ಹಾಗೂ ಮಸೀದಿಗಳಿಗೆ ಸ್ವಾತಂತ್ರ್ಯವಿದೆ. ದೇವಸ್ಥಾನಗಳಿಗೆ ಸ್ವಾತಂತ್ರ್ಯ ನೀಡಲು ಹೊರಟರೆ ಕಾಂಗ್ರೆಸ್ ಗೆ ಉರಿಯುವುದ್ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಕ್ರಿಶ್ಚಿಯನ್ ಹಾಗೂ ಮುಸ್ಲಿಮರರನ್ನು ಓಲೆಕೈ ಮಾಡುವುದರಲ್ಲಿ ಡಿಕೆಶಿ ನಿರತರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಹಿಂದೂಗಳಿಗೆ ತೊಂದರೆ ಆದ್ರೆ ಡಿಕೆಶಿಗೆ ಯಾವುದೇ ಸಮಸ್ಯೆಯಿಲ್ಲ. ನಿಜ ವಿಚಾರವೆಂದರೆ ದೇವಾಲಯಗಳ ಅಭಿವೃದ್ಧಿಗೆ ಕಾಂಗ್ರೆಸ್ ಗೆ ಮನಸ್ಸಿಲ್ಲ. ಹೆಣ್ಣುಮಕ್ಕಳು ಆಮಿಷಕ್ಕೆ ಒಳಗಾಗಿ ಮತಾಂತರವಾದ್ರೂ ಅವರಿಗೆ ಯಾವುದೇ ನೋವಾಗುವುದಿಲ್ಲ. ಇದರಿಂದಾಗಿ ಡಿಕೆಶಿ, ಮುಸ್ಲಿಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವುದು ಒಳ್ಳೆಯದು ಎಂದು ಹೇಳಿದ್ದಾರೆ. ಡಿಸಿಜೆ ಅರ್ಜಿಕೊಟ್ಟು ಹೊಸ ಕಾನೂನಿನ ಅಡಿಯಲ್ಲಿಯೇ ಅವರು ಬೇಕಾದರೆ ಮತಾಂತರಗೊಳ್ಳಲಿ ಎಂದು ಹೇಳಿದ್ದಾರೆ.

Video Top Stories