Asianet Suvarna News Asianet Suvarna News

ರಾಜಹುಲಿಗೆ ಇಲಿಗಳ ಕಾಟ! ಸಿಎಂ ಸಭೆಯೇ ಶಿಫ್ಟ್

ಅಯ್ಯೋ... ಇದೇನಿದು? ನಾಡಿನ ಸಿಎಂಗೆ ಇಲಿಗಳ ಕಾಟವೇ? ಹೌದು ಸರಿಯಾಗಿಯೇ ಓದಿದ್ದೀರಿ. ಇದೆಲ್ಲೋ ಸರ್ಕಾರಿ ಕಚೇರಿಯ ಕಥೆ ಅಲ್ಲ, ವಿಧಾನಸೌಧದ ಕಥೆ! ಮೀಟಿಂಗ್ ರೂಂನಲ್ಲಿ ಇಲಿ ಸತ್ತ ದುರ್ವಾಸನೆ! ವಿಧಾನಸೌಧದ ಅವ್ಯವಸ್ಥೆಗೆ ಅಧಿಕಾರಿಗಳ ವಿರುದ್ಧ ಸಿಎಂ ಗರಂ ಆಗ್ಬಿಟ್ರು!  

ಬೆಂಗಳೂರು (ಅ.14): ಅಯ್ಯೋ... ಇದೇನಿದು? ನಾಡಿನ ಸಿಎಂಗೆ ಇಲಿಗಳ ಕಾಟವೇ? ಹೌದು ಸರಿಯಾಗಿಯೇ ಓದಿದ್ದೀರಿ. ಇದೆಲ್ಲೋ ಸರ್ಕಾರಿ ಕಚೇರಿಯ ಕಥೆ ಅಲ್ಲ, ಶಕ್ತಿ ಕೇಂದ್ರ ವಿಧಾನಸೌಧದ ಕಥೆ!

ಸಿಎಂ ಬಿ.ಎಸ್. ಯಡಿಯೂರಪ್ಪ ಸೋಮವಾರ ವಿಧಾನಸೌಧದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದರು. ಆದರೆ ಆ ಮೀಟಿಂಗ್ ರೂಂನಲ್ಲಿ ಇಲಿ ಸತ್ತ ದುರ್ವಾಸನೆ ಹರಡಿಕೊಂಡಿತ್ತು! ವಿಧಾನಸೌಧದ ಅವ್ಯವಸ್ಥೆಗೆ ಅಧಿಕಾರಿಗಳ ವಿರುದ್ಧ ಸಿಎಂ ಗರಂ ಆಗ್ಬಿಟ್ರು!  

ಸಿಡಿಮಿಡಿಗೊಂಡ ಸಿಎಂ ಮೀಟಿಂಗ್ ಕೋಣೆ ಬಿಟ್ಟು ಹೊರಟೇ ಬಿಟ್ರು. ಕೊನೆಗೆ ತನ್ನ ಕೋಣೆಯಲ್ಲಿ ಮೀಟಿಂಗ್ ಮಾಡೋಣ ಎಂದು ಹೋಗಿಯೇ ಬಿಟ್ರು! 
 

Video Top Stories